ಶಂಕರನಾರಾಯಣ:ಸುಂಟರಗಾಳಿ ಅಬ್ಬರ ಧರೆಗೆ ಉರುಳಿದ ಅಡಿಕೆ ಮರ,ಲಕ್ಷಾಂತರ.ರೂ ನಷ್ಟ

ಕುಂದಾಪುರ:ತಾಲೂಕಿನ ಅಮಾಸೆಬೈಲ್ ಶಂಕರನಾರಾಯಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳ್ಳಂಜೆ ಹೆಗೊಡ್ಡು ರಟ್ಟಾಡಿ ನಡಂಬೂರು ಜನತಾ ಕಾಲೋನಿ ಮುಂತಾದ ಭಾಗದಲ್ಲಿ ಬುಧುವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಬೀಸಿದ ಸುಂಟರಗಾಳಿ ಅಬ್ಬರಕ್ಕೆ ಊರಿಗೆ ಊರೇ ಬೆಚ್ಚಿ ಬಿದ್ದಿದ್ದು ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ,ಸಾವಿರಾರು ಅಡಿಕೆ ಹಾಗೂ ಇನ್ನಿತ್ಯಾದಿ ಬೃಹತಾಕಾರದ ಮರಗಳು ಧರೆಗುರುಳಿದ್ದು ಲಕ್ಷಾಂತರ.ರೂ ನಷ್ಟವಾಗಿದೆ.ಕುಳ್ಳಂಜೆ ಹೆಗೊಡ್ಡು ಸುಬ್ಬ ನಾಯ್ಕ ಹಾಗೂ ಧರ್ಮರಾಜ ನಾಯ್ಕ ಎಂಬವರ ಮನೆಯ ಸಾವಿರಕ್ಕೂ ಮಿಕ್ಕಿ ಅಡಕೆ ಮರಗಳು ಸಂಪೂರ್ಣವಾಗಿ ಗಾಳಿಯ ಅಬ್ಬರಕ್ಕೆ ತುಂಡಾಗಿ ನೆಲಕ್ಕುರುಳಿವೆ […]

ಮಾಜಿ ಮುಖ್ಯಮಂತ್ರಿ ವಿರಪ್ಪ ಮೊಯ್ಲಿ ಪುತ್ರಿ ನಿಧನ

ಬೆಂಗಳೂರು:ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ಅವರು ಅನಾರೋಗ್ಯದ ಕಾರಣದಿಂದ ಭಾನುವಾರ ನಿಧನರಾಗಿದ್ದಾರೆ.ವೀರಪ್ಪಮೊಯ್ಲಿ ಅವರ ಮೂರನೇ ಪುತ್ರಿಯಾಗಿದ್ದ ಹಂಸ ಮೊಯ್ಲಿ ಅವರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು.ತಮದೇ ಆದ ಚೌಕಟ್ಟಿನಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಶಿರೂರು:ಕಳಚಿಕೊಂಡ ರೈಲು ಬೋಗಿ,ತಪ್ಪಿದ ಬಾರಿ ದೊಡ್ಡ ದುರಂತ

ಬೈಂದೂರು:ಗೂಡ್ಸ್‌ ರೈಲೊಂದರ ಬೋಗಿ ಕಳಚಿಕೊಂಡು ಒಂದು ಗಂಟೆಗೂ ಅಧಿಕ ರಸ್ತೆ ತಡೆ ಉಂಟಾದ ಘಟನೆ ಸೋಮವಾರ ಮುಂಜಾನೆ ಹಡವಿನಕೋಣೆ ರೈಲ್ವೆ ಗೇಟ್‌ನಲ್ಲಿ ನಡೆದಿದೆ.ಮಂಗಳೂರಿನಿಂದ ಮಡಗಾಂವ್ ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್‌ ರೈಲಿನ ಮದ್ಯ ಭಾಗದಲ್ಲಿ ಬೋಗಿಗಳು ಕಳಚಿಕೊಂಡು ಬೇರ್ಪಟ್ಟ ಪರಿಣಾಮ ಆತಂಕ ಉಂಟಾಯಿತು.ಮಾತ್ರವಲ್ಲದೆ ರೈಲ್ವೆ ಗೇಟ್ ಹಾಕಿದ ಕಾರಣ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿತ್ತು.ತಕ್ಷಣ ಎಚ್ಚೆತ್ತುಕೊಂಡ ರೈಲ್ವೆ ಅಧಿಕಾರಿಗಳು ಅಲ್ಲಿನ ಬೋಗಿಗಳನ್ನು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಇದರಿಂದಾಗಿ ಸುಮಾರು ಒಂದು ಗಂಟೆ ರೈಲ್ವೆ ಸಂಚಾರ ಮತ್ತು ರಸ್ತೆ […]

You cannot copy content of this page