ಚಿಣ್ಣರ ಕಲರವ-2024,ನೂತನ ಧ್ವಜಕಟ್ಟೆ ಉದ್ಘಾಟನೆ

Share

Advertisement
Advertisement
Advertisement

3 ರಿಂದ 11 ವರ್ಷದ ಒಳಗಿನ ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡಬಹುದು ಎನ್ನುವುದರ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ.ಕಡಿಕೆ ಶಾಲೆಯಲ್ಲಿನ ಮೂಲ ಸೌಕರ್ಯದ ವ್ಯವಸ್ಥೆಯನ್ನು ಗಮನಿಸಿದಾಗ ಬೈಂದೂರು ಕ್ಷೇತ್ರದಲ್ಲಿ ಇದೊಂದು ಮಾದರಿ ಶಾಲೆ ಆಗಿ ಗುರುತಿಸಿಕೊಂಡಿದೆ ಎಂದರು.

ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ನಾಗೇಶ ಭಟ್ ಅಧ್ಯಕ್ಷತೆ ವಹಿಸಿದ್ದರು.ಶ್ರೀರಾಮ ಫಾರ್ಮ್ ಕೋಣ್ಕಿ ಕಾಡ್ರಿಹಾಡಿ ಸುಧಾಕರ ಶೆಟ್ಟಿ ಧ್ವಜಕಟ್ಟೆ ಉದ್ಘಾಟಿಸಿದರು.ನಾಡ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಮೊಗವೀರ ದೀಪ ಬೆಳಗಿಸಿದರು.ಕಡಿಕೆ ಪ್ರವೀಣ್ ಕುಮಾರ್ ಶೆಟ್ಟಿ,ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಗಿರಿಜ,ಪಂಚಾಯತ್ ಸದಸ್ಯೆ ಪದ್ದು ಪೂಜಾರಿ,ಹಾಲು ಉತ್ಪಾದಕರ ಸಹಕಾರಿ ಸಂಘ ಕೋಣ್ಕಿ ಅಧ್ಯಕ್ಷ ರಾಜೀವ ಶೆಟ್ಟಿ,ಚಂದ್ರಶೇಖರ ಶೆಟ್ಟಿ ಕಡಿಕೆ,ಮಾಜಿ ತಾ.ಪಂ ಅಧ್ಯಕ್ಷರಾದ ಮಹೇಂದ್ರ ಪೂಜಾರಿ ಮತ್ತು ಶಂಕರ ಶೆಟ್ಟಿ,ಶಿಕ್ಷಣ ಸಂಯೋಜಕ ಸತ್ಯನಾ ಕೊಡೇರಿ,ಉದ್ಯಮಿ ಗೋಪಾಲ ಶೆಟ್ಟಿ ಜಡ್ಡಾಡಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ.ಜಿ ಮೊಗವೀರ,ಯೋಗಿರಾಜ್ ನಾರಾಯಣ ವಿಠ್ಠಲ,ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಂತೋಷ ಹೆಬ್ಬಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಶ್ರೀಮತಿ ಮತ್ತು ಪ್ರಸಾದ ಶೆಟ್ಟಿ ಮತ್ತು ಮಕ್ಕಳು ಆಮನೆ ಕಡಿಕೆ ಶಾಲೆಗೆ ನೂತನ ಧ್ವಜಕಟ್ಟೆಯನ್ನು ಕೊಡುಗೆ ಆಗಿ ನೀಡಿದ್ದರು.

ಬೆಳಕು ಚಾರಿಟೇಬಲ್ ಟ್ರಸ್ಟ್ ರಾಘವೇಂದ್ರ ಶೆಟ್ಟಿ ಶಾಲೆಗೆ ಎರಡು ಕಂಪ್ಯೂಟರ್ ಅನ್ನು ಕೊಡುಗೆ ಆಗಿ ನೀಡಿದರು.
ಶಿಕ್ಷಕಿ ಪೂಜಾ ಸ್ವಾಗತಿಸಿದರು.ಶಿಕ್ಷಕ ಸಂದೀಪ ದೇವಾಡಿಗ ನಿರೂಪಿಸಿದರು.ಶಿಕ್ಷಕಿಯರಾದ ಶಿಲ್ಪಾ ಶ್ರೀ ಅಡಿಗ ಬಹುಮಾನ ಪಟ್ಟಿ ವಾಚಿಸಿದರು.ಸುಪ್ರಿತಾ ಶೆಟ್ಟಿ ವಂದಿಸಿದರು.ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Advertisement


Share

Leave a comment

Your email address will not be published. Required fields are marked *

You cannot copy content of this page