ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ,ಸಾಧಕ ಕಲಾವಿದರಿಗೆ ಸನ್ಮಾನ
![](https://kundapurtimes.com/wp-content/uploads/2024/04/WhatsApp-Image-2024-04-26-at-1.30.27-PM-2-1024x462.jpeg)
![](https://kundapurtimes.com/wp-content/uploads/2024/04/26MR-1-Yakshagana-4.jpg)
![](https://kundapurtimes.com/wp-content/uploads/2024/04/26MR-1-Yakshagana-2-1024x584.jpg)
![](https://kundapurtimes.com/wp-content/uploads/2024/04/WhatsApp-Image-2024-04-26-at-1.30.27-PM-1-1024x576.jpeg)
ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣ್ಕಿ ಕೂಡ್ಲಿಹಿತ್ಲು ಎಂಬಲ್ಲಿ ಯಕ್ಷಪ್ರೇಮಿ ರಶ್ಮಿತಾ ಸಂಜಯ್ ಮೊವಾಡಿ ಅವರ ಪ್ರಾಯೋಜಕತ್ವದಲ್ಲಿ ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಗುರುವಾರ ನಡೆಯಿತು.
ಸಿಗಂದೂರು ಮೇಳದವರಿಂದ ಮತದಾನ ಜಾಗೃತಿ ಕುರಿತು ವಿಶೇಷ ನಾಟ್ಯ ಪ್ರದರ್ಶನವನ್ನು ಮಾಡಲಾಯಿತು.ಬಡಗುತಿಟ್ಟಿನ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಲಾಯಿತು.
ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮದ ಆಯೋಜಕರಾದ ರಶ್ಮಿತಾ ಸಂಜಯ್ ಮೊವಾಡಿ ಅವರು ಸಾಧಕ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಮಾತನಾಡಿ,ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಎನ್ನುವುದು ಬಹಳ ದಿನಗಳ ಕಾಲದ ಕನಸಾಗಿದೆ.ಯುವ ಪೀಳಿಗೆಗೆ ಉತ್ತಮವಾದ ಸಂದೇಶವನ್ನು ನೀಡಬೇಕು ಎನ್ನುವ ದೃಷ್ಟಿಯಲ್ಲಿ ಇವೊಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು.ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು.
ರಾಘವೇಂದ್ರ ಮೆಂಡನ್ ಕೋಣ್ಕಿ ಮಾತನಾಡಿ,ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ಅದ್ದೂರಿಯಾಗಿ ನಡೆದಿದೆ.ಕಲಾವಿದರನ್ನು ಸನ್ಮಾನಿಸಿ,ಅಶಕ್ತ ಕುಟುಂಬಕ್ಕೆ ನೆರವನ್ನು ನೀಡುವುದರ ಮೂಲಕ ಮಾದರಿ ಕಾರ್ಯಕ್ರಮವನ್ನು ಆಯೋಜಿಸಿರುವ ರಶ್ಮಿತಾ ಸಂಜಯ್ ಮೊವಾಡಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಆಗಬೇಕು ಎಂದು ಹೇಳಿದರು.
ಆರ್.ಜೆ ಇಂದ್ರ ಮಾತನಾಡಿ,ಯಕ್ಷೋತ್ಸ ಕಾರ್ಯಕ್ರಮ ಬಹಳಷ್ಟು ಅದ್ದೂರಿಯಾಗಿ ಆಯೋಜನೆ ಮಾಡಲಾಗಿದ್ದು ಊರಿನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಉಂಟಾಗಿದೆ.ಇದೊಂದು ಮಾದರಿ ಯಕ್ಷಗಾನ ಕಾರ್ಯಕ್ರಮವಾಗಿದ್ದು ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು ಎಂದರು.
ಉದಯಕುಮಾರ್ ಹಟ್ಟಿಯಂಗಡಿ,ಪ್ರವೀಣ ಕುಮಾರ್ ಶೆಟ್ಟಿ ಕಡಿಕೆ,ರಾಘವೇಂದ್ರ ಮೆಂಡನ್,ಭಾಸ್ಕರ ಸಿ ಕುಂದರ್,ನಾಗರಾಜ,ಸಂದೀಪ್ ಬಸ್ರೂರು,ವಿಜಯ ಜಿ ಮೆಂಡನ್,ರಶ್ಮಿತಾ ಸಂಜಯ್ ಕೂಡ್ಗಿಹಿತ್ಲು ಉಪಸ್ಥಿತರಿದ್ದರು.
ಸಾಲಿಗ್ರಾಮ ಮೇಳದ ಶ್ರೇಷ್ಠ ಕಲಾವಿದರಾದ ಶಶಿಕಾಂತ್ ಶೆಟ್ಟಿ ಕಾರ್ಕಳ,ಮಾರಣಕಟ್ಟೆ ಮೇಳದ ನಂದೀಶ್ ಮೊಗವೀರ ಜನ್ನಾಡಿ ಮತ್ತು ಭಾಗವತರಾದ ಗಜೇಂದ್ರ ಆಜ್ರಿ,ಸಿಗಂದೂರು ಮೇಳದ ಆನಂದ ಅಂಕೋಲಾ ಮತ್ತು ನರಸಿಂಹ ಚಿಟ್ಟಾಣಿ,ಮೇಳದ ಸಿಬ್ಬಂದಿ ಗಜಾನನ ಮರಾಠಿ ಹಾಗೂ ಬೆಂಗಳೂರು ಉದ್ಯಮಿ ವರುಣ್ ಅವರನ್ನು ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮದ ಅಂಗವಾಗಿ ರಂಗಸ್ಥಳದಲ್ಲಿ ಸನ್ಮಾನಿಸಲಾಯಿತು.
ವಿಶೇಷ ಚೇತನ ಶ್ರೀರಕ್ಷಾ ಅವರಿಗೆ ಧನಸಹಾಯವನ್ನು ವಿತರಿಸಲಾಯಿತು.
ಆರ್.ಜೆ ಇಂದ್ರ ಸ್ವಾಗತಿಸಿ,ವಂದಿಸಿದರು.ಸಿಗಂದೂರು ಮೇಳದವರಿಂದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು.ಯಕ್ಷೋತ್ಸವ ಕಾರ್ಯಕ್ರಮದಲ್ಲಿ ರಶ್ಮಿತಾ ಸಂಜಯ್ ಮೊವಾಡಿ ದಂಪತಿಗಳನ್ನು ಸಿಗಂದೂರು ಮೇಳದ ವತಿಯಿಂದ ಗೌರವಿಸಲಾಯಿತು.
ವರದಿ:-ರಾಕೇಶ್
ನಮ್ಮ ಜಾಲತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ-9916284048