ಸರಕಾರಿ ಕಿರಿಯ ಪ್ರಾಥಮಿಕ ಹೆಮ್ಮುಂಜೆ ಶಾಲೆಯಲ್ಲಿ, ಪ್ರತಿಭಾ ಸಿಂಚನ-2 ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ:ಸರಕಾರಿ ಕಿರಿಯ ಪ್ರಾಥಮಿಕ ಹೆಮ್ಮುಂಜೆ ಶಾಲೆಯಲ್ಲಿ ಪ್ರತಿಭಾ ಸಿಂಚನ-2 ಕಾರ್ಯಕ್ರಮ ನಡೆಯಿತು. ಶಾಸಕ ಗುರುರಾಜ್ ಗಂಟಿಹೊಳೆ ಶುಭ ಹಾರೈಸಿದರು.ರಾಜೀವ್ ಶೆಟ್ಟಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉದ್ಘಾಟಿಸಿದರು.ದಾನಿಗಳಾದ ಅಶೋಕ್ ಶೆಟ್ಟಿ ಬೆಳ್ಳಾಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಶಾಲಾ ಕಟ್ಟಡವನ್ನು ಹೊಸದಾಗಿ ನಿರ್ಮಿಸುವುದರ ಕುರಿತು ಭರವಸೆ ನೀಡುವುದರೊಂದಿಗೆ ತಾವು ಕಲಿತ ಶಾಲೆಗೆ ಜೊತೆ ಸದಾ ಬೆಂಗಾವಲಾಗಿ ನಿಲ್ಲುತ್ತೇನೆ ಎನ್ನುವ ವಿಶ್ವಾಸ ನುಡಿಯನ್ನಾಡಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ ಅವರ ಶಾಲೆಯ ಕುರಿತಾದ ನಿರಂತರ ಹೋರಾಟದ ಫಲವನ್ನು ಶ್ಲಾಘಿಸಿದರು.ಇನ್ನು ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳಾದ ಸುರೇಂದ್ರ ಇವರು ಮಾತನಾಡಿ ಸರಕಾರಿ ಶಾಲೆ ಇಷ್ಟೊಂದು ಅಭಿವೃದ್ಧಿಗೊಂಡಿರುವ ಕುರಿತು ಹೆಮ್ಮೆ ವ್ಯಕ್ತಪಡಿಸಿ ಅದಕ್ಕೆ ಕಾರಣೀಭೂತರಾದ ಶಾಲಾ ಶಿಕ್ಷಕರಾದ ನಾಗರಾಜ್ ಶೆಟ್ಟಿ ಹಾಗೂ ಎಸ್ ಡಿಂಎಸಿ ಅಧ್ಯಕ್ಷ ಚಂದ್ರಶೇಖರ್ ಆಚಾರ್ಯ ಇವರೀರ್ವರ ಕಠಿಣ ಪರಿಶ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲಾ ಮುಖ್ಯೋಪಾಧ್ಯಾಯರ ಅಶ್ವಿನಿ ಹೆಬ್ಬಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ನಾಡ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಪಾರ್ವತಿ ಪ್ರಭಾಕರ್ ಶೆಟ್ಟಿ ಇವರು ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿದರು.ಈ ಸಭೆಯಲ್ಲಿ ಶಶಿಧರ್ ಶೆಟ್ಟಿ ಸಾಲ್ಗದ್ದೆ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ ,ಶಿಕ್ಷಣ ಸಂಯೋಜಕರಾದ ಯೋಗೀಶ್ , ಸುನಿಲ್ ಶೆಟ್ಟಿ ,ದಿನೇಶ್ ಕೆ, SDMC ಅಧ್ಯಕ್ಷರಾದ ಚಂದ್ರಶೇಖರ್ ಆಚಾರ್ಯ , ಅಶ್ವಿನಿ ಹೆಬ್ಬಾರ್ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು ವಿಜೇತರ ಪಟ್ಟಿಯನ್ನು ಅತಿಥಿ ಶಿಕ್ಷಕರಾದ ಕುಮರಿ ಅಂಕಿತಾ ಪೂಜಾರಿ ವಾಚಿಸಿದರು
ನಂತರ ಶಾಲಾ ಮಕ್ಕಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಶಿಕ್ಷಕರಾದ ನಾಗರಾಜ್ ಶೆಟ್ಟಿ ಸ್ವಾಗತಿಸಿ, ಸುಪ್ರೀತಾ ಶೆಟ್ಟಿ ಬಡಾಕೆರೆ ನಿರೂಪಿಸಿದರು.