ಸಂಪರ್ಕ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಂಡ ಮೀನುಗಾರರು,ಸರ್ಕಾರದ ನಿರುತ್ಸಾಹ ಧೋರಣೆ
ಕುಂದಾಪುರ:ಬಿಪರ್ ಜಾಯ್ ಚಂಡಮಾರುತದ ಪ್ರಭಾವದಿಂದ ಕಡಲಬ್ಬರ ಉಂಟಾಗಿ ಬೈಂದೂರು ತಾಲೂಕಿನ ಮರವಂತೆ ಕರಾವಳಿ ಭಾಗದ ಫಿಶರೀಷ್ ರಸ್ತೆ ಬಿರುಕು ಬಿಟ್ಟು ಸಂಪರ್ಕ ಕಡಿತವಾಗಿದ್ದರೂ ಸರಕಾರ ಮತ್ತು ಜನಪ್ರತಿನಿಧಿಗಳು,ಇಲಾಖಾಧಿಕಾರಿಗಳು ಯಾವುದೇ ರೀತಿ ಕ್ರಮಗಳನ್ನು ಕೈಗೊಳ್ಳದೆ ಇದ್ದಿದ್ದರಿಂದ ಬೇಸತ್ತ ಮೀನುಗಾರರು ರಸ್ತೆ ಸಂಪರ್ಕ ವ್ಯವಸ್ಥೆಗಾಗಿ ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ವತಿಯಿಂದ ಸುಮಾರು 10.ಲಕ್ಷ.ರೂ ವ್ಯಯಿಸಿ ಕಡಲ ದಂಡೆಗೆ ಕಲ್ಲುಗಳನ್ನು ಹಾಕಿ ಸುಮಾರು 100.ಮೀಟರ್ ವರೆಗಿನ ಸಂಪರ್ಕ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಂಡಿದ್ದಾರೆ.
ಮರವಂತೆ ಕಡಲ ತಡಿಯ ನಿವಾಸಿಗಳಾದ ಮೀನುಗಾರರಿಗೆ ಫಿಶರೀಷ್ ರಸ್ತೆ ಪ್ರಮುಖ ರಸ್ತೆ ಆಗಿದೆ,ಕಳೆದ ವರ್ಷ ಕಾಣಿಸಿಕೊಂಡಿದ್ದ ತೌಕ್ತೆ ಚಂಡ ಮಾರುತದ ಹೊಡೆತಕ್ಕೆ ಮೀನುಗಾರಿಕಾ ರಸ್ತೆ ಸಂಪೂರ್ಣ ಹಾನಿಯಾಗಿತ್ತು.ಕಡಲ ದಂಡೆ ಸಮುದ್ರ ಪಾಲಾಗಿ ಮೀನುಗಾರರ ಮೂಲಭೂತ ಸೌಕರ್ಯಗಳು ನಾಶವಾಗಿದ್ದರೂ ಸರಕಾರ ಯಾವುದೇ ರೀತಿ ಕ್ರಮಗಳನ್ನು ಕೈಗೊಳ್ಳದೆ ಪರಿಹಾರ ನೀಡದೆ ಅಸಡ್ಡೆಯನ್ನು ತೋರಿದೆ.ಈ ಬಾರಿ ಕಾಣಿಸಿಕೊಂಡಿದ್ದ ಬಿಪರ್ ಜಾಯ್ ಚಂಡ ಮಾರುತದಿಂದ ಮತ್ತೆ ಮರವಂತೆ ಫಿಶರೀಷ್ ರಸ್ತೆಗೆ ಹಾನಿಯಾಗಿದ್ದರೂ ಜನಪ್ರತಿನಿಧಿಗಳು,ಅಧಿಕಾರಿಗಳು ಯಾವುದೇ ರೀತಿ ಕ್ರಮಗಳನ್ನು ಕೈಗೊಂಡಿರಲಿಲ್ಲ. ಚಂಡಮಾರುತದ ಪ್ರಭಾವದಿಂದ ಕರಾವಳಿ ಭಾಗದ ಮರವಂತೆಯಲ್ಲಿ ಹಾನಿಯಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವರು ಇತ್ತ ಕಡೆ ದೃಷ್ಟಿಯನ್ನು ಹಾಯಿಸದೆ ತಮಗೂ ಕಡಲ್ಕೊರೆತಕ್ಕೂ ಯಾವುದೆ ರೀತಿ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.