ಏಪ್ರಿಲ್ 23 ರಂದು ಬಗ್ವಾಡಿ ಶ್ರೀಮಹಿಷಾಸುರ ಮರ್ದಿನಿ ದೇವಿಯ ಬ್ರಹ್ಮರಥೋತ್ಸವ

Share

Advertisement
Advertisement
Advertisement

ಕುಂದಾಪುರ:ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಏಪ್ರಿಲ್ 23 ರಂದು ಮಂಗಳವಾರ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀದೇವಿಯ ಬ್ರಹ್ಮರಥೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಕ್ಕೆ ಮಹಿಳೆಯರಿಂದ ಸಾಮೂಹಿಕ ಕುಂಕಮಾರ್ಚನೆ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.ಸಂಜೆ 6 ರಿಂದ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾರಥ್ಯದಲ್ಲಿ ಟೀಮ್ ಮಸ್ತ್ಯಗಂಧ ಇವರಿಂದ ಶ್ರೀರಾಮ ದರ್ಶನಂ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 24 ರಂದು ಕುಣಿತ ಭಜನೆ:ಏಪ್ರಿಲ್ 24 ರ ಬುಧವಾರದಂದು ಸಂಜೆ 6 ರಿಂದ ಕುಣಿತ ಭಜನೆ,ಸಂಜೆ 7 ರಿಂದ ಬಗ್ವಾಡಿ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ 14ನೇ ವರ್ಷದ ಸಾಂಸ್ಕøತಿಕ ಉತ್ಸವ ಕಲರವ-2024 ಜರುಗಲಿದೆ.ಕರಾವಳಿ ಹೆಸರಾಂತ ನೃತ್ಯ ತಂಡದಿಂದ ನೃತ್ಯ ವೈಭವ,ಸಂಗೀತ ರಸ ಸಂಜೆ ನಡೆಯಲಿದೆ.ಏಪ್ರಿಲ್ 25 ರಂದು ಶ್ರೀದೇವಿಯ ತೆಪ್ಪೋತ್ಸವ ಸೇವೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page