ಹೆಮ್ಮಾಡಿ:ರಾತ್ರೋರಾತ್ರಿ ಲಾರಿಗಳ ಮೇಲೆ ಪೊಲೀಸ್ ನೋಟಿಸ್-ಶರತ್ ಕುಮಾರ್ ಶೆಟ್ಟಿ ಆರೋಪ

ಕುಂದಾಪುರ:3ಎ ಲೆಸನ್ಸ್ ರದ್ದುಗೊಳಿಸಿ ಕಠಿಣ ಕಾನೂನನ್ನು ಜಾರಿ ಮಾಡಿ ಕಟ್ಟಡ ಸಾಮಾಗ್ರಿ ಸಾಗಾಟದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಲಾರಿ ಮತ್ತು ಟೆಂಪೊ ಮಾಲೀಕರು ಮತ್ತು ಚಾಲಕರ ಸಂಘ ಬೈಂದೂರು ವಲಯದ ವತಿಯಿಂದ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರದ ಅಂಗವಾಗಿ ಹೆಮ್ಮಾಡಿ ಹೆದ್ದಾರಿ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಿ ಕಳೆದ ಐದು ದಿನಗಳಿಂದ ನಿರಂತರವಾಗಿ ಪ್ರತಿಭಟನೆಯನ್ನು ಮಾಡಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಬದಿಯಲ್ಲಿ ಟಿಪ್ಪರ್ ಮತ್ತು ಲಾರಿಗಳನ್ನು ನಿಲಿಸಿದ್ದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತದೆ ಎನ್ನುವ ನೆಪ ಒಡ್ಡಿದ ಪೊಲೀಸ್ ಇಲಾಖೆ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ ವಾಹನಗಳನ್ನು ತೆರವುಗೊಳಿಸುವಂತೆ ರಾತ್ರೋರಾತ್ರಿ ಲಾರಿಗಳ ಮೇಲೆ ನೋಟಿಸ್ ಅಂಟಿಸಿದೆ.ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕಳೆದ ಐದು ದಿನಗಳಿಂದ ಶಾಂತಿಯುತವಾದ ಹೋರಾಟವನ್ನು ಮಾಡುತ್ತಿದ್ದೇವೆ.ನಮ್ಮ ಹೋರಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುಖಾಸುಮ್ಮನೆ ಕಾರಣ ಒಡ್ಡಿ.ವಾಹನಗಳನ್ನು ತೆರವು ಮಾಡುವಂತೆ ಪೊಲೀಸ್ ಇಲಾಖೆ ರಾತ್ರೋರಾತ್ರಿ ಲಾರಿ,ಟಿಪ್ಪರ್ ಮೇಲೆ ನೋಟಿಸ್ ಅಂಟಿಸಿರುವುದು ನಾಚಿಗೇಡಿನ ಸಂಗತಿ.ಹಗಲಿನಲ್ಲಿ ಇವರಿಗೆ ಸಮಯ ಇಲ್ಲವೆ ಎಂದುಬೈಂದೂರು ವಲಯ ಲಾರಿ ಮತ್ತು ಟೆಂಪೊ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ವಾಗ್ದಾಳಿ ನಡೆಸಿದ್ದಾರೆ.