ಶ್ರೀಮಹಾಗಣಪತಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ
![](https://kundapurtimes.com/wp-content/uploads/2024/03/abaeb35d-5028-4585-8428-20a147865474-1024x576.jpg)
![](https://kundapurtimes.com/wp-content/uploads/2024/03/b92d19a0-24c2-419a-bab0-baa002f52797-1024x576.jpg)
![](https://kundapurtimes.com/wp-content/uploads/2024/03/8f3a1722-98f4-4a9d-96b5-f5ee20e1408f-1024x481.jpg)
![](https://kundapurtimes.com/wp-content/uploads/2024/03/9195aba3-ba56-4f22-bd0d-98943240fb4d-1024x576.jpg)
![](https://kundapurtimes.com/wp-content/uploads/2024/03/3c0a8dcb-a8fc-4541-8347-ba18fc49ef01-1024x462.jpg)
![](https://kundapurtimes.com/wp-content/uploads/2024/03/91000103-3f34-4673-9d4f-4ad253316d55-1024x436.jpg)
![](https://kundapurtimes.com/wp-content/uploads/2024/03/86951383-2948-4f58-984b-45a8f4a0b14e-1024x418.jpg)
![](https://kundapurtimes.com/wp-content/uploads/2024/03/b32effcc-cf1c-4bb8-b561-2bfff4969b48-1024x436.jpg)
![](https://kundapurtimes.com/wp-content/uploads/2024/03/7771542c-b865-4b99-8d47-dda694701919-1024x576.jpg)
![](https://kundapurtimes.com/wp-content/uploads/2024/03/62f82297-2e70-4116-8dff-02aa92aca24f-1024x469.jpg)
![](https://kundapurtimes.com/wp-content/uploads/2024/03/ac3a7125-bd9d-4a40-a1e5-b220f40d02a8-1024x414.jpg)
![](https://kundapurtimes.com/wp-content/uploads/2024/03/bf9a8189-da1f-49d3-bfb9-67c454375a26-1024x576.jpg)
![](https://kundapurtimes.com/wp-content/uploads/2024/03/b32effcc-cf1c-4bb8-b561-2bfff4969b48-1-1024x436.jpg)
![](https://kundapurtimes.com/wp-content/uploads/2024/03/70919686-21b8-46e5-92d2-0928e11b9988-1024x505.jpg)
![](https://kundapurtimes.com/wp-content/uploads/2024/03/8baf42bc-10b8-4f2c-8a9b-c8b8548f5c39-1024x426.jpg)
![](https://kundapurtimes.com/wp-content/uploads/2024/03/bcdfdc53-47fc-4f97-8dc0-c8b5e7f2dffe-1024x538.jpg)
ಕುಂದಾಪುರ:ತಾಲೂಕಿನ ಹರ್ಕೂರು ಗ್ರಾಮದ ಶ್ರೀಮಹಾಗಣಪತಿ ದೇವಸ್ಥಾನದ ತಾಮ್ರದ ಹೊದಿಕೆಯ ನೂತನ ಶಿಲಾದೇಗುಲ ಸಮರ್ಪಣೆ ಹಾಗೂ ಶ್ರೀದೇವರ ಪುನರ್ ಪ್ರತಿಷ್ಠೆ ಅಂಗವಾಗಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ನಡೆಯಿತು.ಶ್ರೀ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಮಹಾಮಂಗಳಾರತಿ ಪೂಜೆ,ಮಹಾಪೂಜೆ,ಮಹಾ ಅನ್ನಸಂತರ್ಪಣೆ,ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ಜರುಗಿತು.ನೂತನ ದೇವಾಲಯ ನಿರ್ಮಾಣಕ್ಕೆ ದಾನಿಗಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
![](https://kundapurtimes.com/wp-content/uploads/2024/03/57a4c4c3-d5f4-40c1-b373-6b0fa44dce37-1024x492.jpg)
ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಅಪ್ಪಣ್ಣ ಹೆಗ್ಡೆ ಅವರು ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ವಿಶೇಷವಾದ ಶ್ರಮವನ್ನು ವಹಿಸಿ ಈ ದೇವಾಲಯವನ್ನು ಸುಂದರವಾಗಿ ನಿರ್ಮಿಸಲಾಗಿದೆ.ದೇವಸ್ಥಾನವನ್ನು ಕಟ್ಟುವುದಕ್ಕಿಂತಲೂ ವ್ಯವಸ್ಥಿತವಾದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.
ಪ್ರಾಂತೀಯ ಧರ್ಮಾಧಿಕಾರಿಗಳು ಶಾರದಾ ಪೀಠಂ ಶೃಂಗೇರಿ ವೇದ.ಮೂರ್ತಿ ಲೋಕೇಶ ಅಡಿಗ ನಾಗಪಾತ್ರಿಗಳು ಬಡಾಕೆರೆ ಅವರು ಧಾರ್ಮಿಕ ಪ್ರವಚನ ನೀಡಿ ಮಾತನಾಡಿ,ಸರ್ವಶಕ್ತನಾದ ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಕಾರ್ಯಕ್ರಮದಿಂದ ಊರಿಗೆ ಹೊಸಬೆಳಕನ್ನು ನೀಡಿದಂತೆ ಆಗಿದೆ.ಶ್ರೀಮಹಾಗಣಪತಿ ದೇವರು ಭಕ್ತರ ಎಲ್ಲಾ ಇಷ್ಟಾರ್ಥವನ್ನು ಸಾಕಾರಗೊಳಿಸಲಿ ಎಂದು ಶುಭಹಾರೈಸಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಉದ್ಯಮಿಗಳು ಘಟಪ್ರಭಾ ಎಚ್.ಜಯಶೀಲ ಎನ್ ಶೆಟ್ಟಿ ಅವರು ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ,ಹರ್ಕೂರು ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠ ಮತ್ತು ನೂತನ ಶಿಲಾದೇಗುಲದ ಲೋಕಾರ್ಪಣೆ ಕಾರ್ಯಕ್ರಮದ ವಿಜೃಂಭಣೆಯಿಂದ ನಡೆದಿದೆ ಎಂದರು.ಸತತ ಮೂರು ದಿನಗಳ ಕಾಲ ನಡೆದ ದೇವತಾ ಕಾರ್ಯದಲ್ಲಿ ತೊಡಗಿಕೊಂಡು ಶ್ರಮಿಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು.
ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರರಾದ ಕೃಷ್ಣಪ್ರಸಾದ ಅಡ್ಯಂತಾಯ ಅವರು ಮಾತನಾಡಿ,ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಬಹಳಷ್ಟು ಯಶಸ್ಸಿನಿಂದ ನಡೆದಿದೆ.ಎಲ್ಲಾ ಕಾರ್ಯವೂ ಶ್ರೀದೇವರ ಆರ್ಶೀವಾದದಿಂದ ಸಾಧ್ಯವಾಯಿತು ಎಂದರು.
ದೇವಸ್ಥಾನದ ಕಾರ್ಯಾಧ್ಯಕ್ಷರಾದ ಮಂಜಯ್ಯ ಶೆಟ್ಟಿ ಹರ್ಕೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಅನೇಕ ವರ್ಷಗಳಿಂದ ಪಾಳುಬಿದ್ದ ದೇವಸ್ಥಾನವನ್ನು ಸುಸಜ್ಜಿತವಾದ ರೀತಿಯಲ್ಲಿ ದಾನಿಗಳು ಮತ್ತು ಊರವರ ಸಹಕಾರದಿಂದ ನಿರ್ಮಾಣ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಇವೊಂದು ಕ್ಷೇತ್ರ ಹೆಸರುವಾಸಿಯಾಗಿ ಮೆರೆಯಲಿ ಎಂದರು.
ದೇವಸ್ಥಾನದ ಗೌರವಾಧ್ಯಕ್ಷರಾದ ಚಿತ್ತರಂಜನ್ ಹೆಗ್ಡೆ ಅವರು ಸ್ವಾಗತಿಸಿ ಮಾತನಾಡಿ,ಗತಕಾಲದ ಇತಿಹಾಸವನ್ನು ಹೊಂದಿರುವ ಶ್ರೀಮಹಾಗಣಪತಿ ದೇವಾಲಯ ತಾಮ್ರದ ಹೊದಿಕೆಯೊಂದಿಗೆ ಶಿಲಾಮಯ ಗೊಂಡಿರುವುದು ನಮಗೆಲ್ಲ ಸಂತೋಷದ ಸಂಗತಿ ಆಗಿದೆ.ಶ್ರೀಮಹಾಗಣಪತಿ ದೇವರು ಎಲ್ಲರಿಗೂ ಒಳಿತನ್ನು ಕರುಣಿಸಲಿ ಎಂದು ಶುಭಹಾರೈಸಿದರು.ಈ ಸಂದರ್ಭದಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಸುಷ್ಮಾ ಮಂಜನಾಥ ರೈ,ಕಿಶೋರ ಹೆಗ್ಡೆ ಕೈಲ್ಕೆರೆ,ಕೋಶಾಧಿಕಾರಿ ಶಶಿಧರ ಶೆಟ್ಟಿ,ಆನಂದ ಶೆಟ್ಟಿ ಹಳಗೇರಿಮನೆ ನಾರ್ಕಳಿ ಉಪಸ್ಥಿತರಿದ್ದರು.ಶಿಕ್ಷಕರಾದ ಉದಯ ಕುಮಾರ್ ಶೆಟ್ಟಿ ಮತ್ತು ಸುನೀಲ್ ಶೆಟ್ಟಿ ನಿರೂಪಿಸಿದರು.ಕಾರ್ಯದರ್ಶಿ ಪದ್ಮನಾಭ ಅಡಿಗ ವಂದಿಸಿದರು.