ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ

Share

Advertisement
Advertisement
Advertisement

ಕುಂದಾಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನ ಜಾಗೃತಿ ವೇದಿಕೆ ಅವರ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ತಾಲೂಕಿನ ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ ಕಾರ್ಯಕ್ರಮ ಶ್ರೀಮಹಾರಾಜ ಸ್ವಾಮಿ ವರಹಾ ದೇವಸ್ಥಾನ ಮರವಂತೆಯಲ್ಲಿ ನಡೆಯಿತು.
ಮಾಜಿ ಶಾಸಕ ತಾಲೂಕು ಭಜನಾ ಪರಿಷತ್ತಿನ ಗೌರವಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಎಂ ನಾಯಕ್,ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಘುರಾಮ ಕೆ ಪೂಜಾರಿ ಮತ್ತು ನೂತನ ಅಧ್ಯಕ್ಷ ವಾಸು ಮೇಸ್ತ,ಜನಜಾಗೃತಿ ಅಧ್ಯಕ್ಷ ಸುಧಾಕರ ಆಚಾರ್ಯ,ಯೋಜನಾಧಿಕಾರಿ ವಿನಾಯಕ ಪೈ,ಪರಿಷತ್ ಮಾಜಿ ಅಧ್ಯಕ್ಷ ಜಿ.ಸುಬ್ಬ,ಭಜನಾ ಕಮ್ಮಟ ತರಬೇತುದಾರ ಸತೀಶ್ ಮೊವಾಡಿ,ಭಜನಾ ಪರಿಚತ್ತಿನ ಉಪಾದ್ಯಕ್ಷ ಮಂಜು ಪೂಜಾರಿ,ಸಂಯೊಜಕ ಕೃಷ್ಣ ಪೂಜಾರಿ ತ್ರಾಸಿ,ಮಂಜುನಾಥ್ ಹೊಸಾಡು,ಬಾಬು ದೇವಾಡಿಗ,ವಲಯ ಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.ಮಂಜುನಾಥ ಸ್ವಾಗತಿಸಿದರು.ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಕೃಷ್ಣ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೃಷಿ ಅಧಿಕಾರಿ ರಾಜು ನಿರ್ವಹಿಸಿದರು.ಮೇಲ್ವಿಚಾರಕ ರಾಮ ಎನ್ ವಂದಿಸಿದರು.ಹಿರಿಯ ಭಜನಾ ಹಾಡುಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

Advertisement


Share

Leave a comment

Your email address will not be published. Required fields are marked *

You cannot copy content of this page