ವಿದ್ಯಾ ಪೋಷಕ್ ಮನೆ ಹಸ್ತಾಂತರ

ಕುಂದಾಪುರ:ಯಕ್ಷಗಾನ ಕಲಾರಂಗ ಉಡುಪಿ,ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ಮೆಂಟ್,ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್,ಯಕ್ಷನಿಧಿ,ವಿದ್ಯಾ ಪೋಷಕ್ ಮನೆ ಹಸ್ತಾಂತರ ,ಯಕ್ಷಶಿಕ್ಷಣ ಹಾಗೂ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ಪ್ರಾಯೋಜಕತ್ವದಲ್ಲಿ ದಾನಿಗಳ ನೆರವಿನಿಂದ ಹೆಮ್ಮಾಡಿ ಗ್ರಾಮದ ಕಟ್ಟು ಎಂಬಲ್ಲಿ ನಿರ್ಮಿಸಿದ ನೂತನೆ ಮನೆ ಸರಸ್ವತಿ ನಿಲಯ ಅದರ ಹಸ್ತಾಂತ ಕಾರ್ಯಕ್ರಮ ಗುರುವಾರ ನಡೆಯಿತು.
ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಜ್ಯೋತಿ ಬೆಳಗಿಸುವುದರ ಮುಖೇನ ನೂತನ ಮನೆಯನ್ನು ಉದ್ಘಾಟಿಸಿ ಮಾತನಾಡಿ,ಅತ್ಯಂತ ಬಡತನದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಾಸಕ್ಕೆ ಯೋಗ್ಯವಾದ ಮನೆಯನ್ನು ನಿರ್ಮಿಸಿಕೊಡುವುದರ ಮುಖೇನ ವಿಶಿಷ್ಟವಾದ ರೀತಿಯಲ್ಲಿ ಸಾಮಾಜಿಕ ಕಾರ್ಯವನ್ನು ಮಾಡುತ್ತಿರುವ ಯಕ್ಷಗಾನ ಕಲಾರಂಗ ಅವರ ಸೇವೆ ಅನನ್ಯವಾದದ್ದು ಎಂದು ಶ್ಲಾಘಿಸಿದರು.
ಕೃಷ್ಣಪ್ರಸಾದ್ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು.ಬಿ.ಎಸ್ ಸುರೇಶ್ ಶೆಟ್ಟಿ,ವೆಂಕಟೇಶ ಕಿಣಿ,ಯು.ವಿಶ್ವನಾಥ ಶೆಣೈ,ಯು.ಎಸ್ ರಾಜಗೋಪಾಲ ಆಚಾರ್ಯ,ಹೆಮ್ಮಾಡಿ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ,ರಾಜೇಶ್,ಗೋಪಾಲ ಶೆಟ್ಟಿ,ಎಸ್.ವಿ ಭಟ್,ವಿ.ಜಿ ಶೆಟ್ಟಿ,ಪ್ರೋ.ಕೆ ಸದಾಶಿವ ರಾವ್,ಶೋಭಾ ಜಿ ಪುತ್ರನ್,ಹೆಮ್ಮಾಡಿ ಶಾಲಾ ಮುಖ್ಯೋಪಾಧ್ಯಾಯ ಮಂಜು ಕಾಳವಾರ,ನರಸಿಂಹ ಮೂರ್ತಿ,ಬಿ.ಭುವನಪ್ರಸಾದ್ ಹೆಗ್ಡೆ,ಅನಂತ ರಾಜ್ ಉಪಾಧ್ಯಾಯ,ಸಂತೋಷ ಕುಮಾರ್ ಶೆಟ್ಟಿ,ಎ.ಅಜಿತ್ ಕುಮಾರ್,ಸುದರ್ಶನ ಬಾಯರಿ ಉಪಸ್ಥಿತರಿದ್ದರು.ಎಂ.ಗಂಗಾಧರ ರಾವ್ ಸ್ವಾಗತಿಸಿದರು.ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಚ್.ಎನ್ ಶೃಂಗೇಶ್ವರ ಸಹಕರಿಸಿದರು.ನಾರಾಯಣ ಹೆಗಡೆ ವಂದಿಸಿದರು.ದ್ವಿತೀಯ ಪಿ.ಯು.ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕಟ್ಟು ನಿವಾಸಿ ಸಿಂಚನಾ ಅವರಿಗೆ ವಿದ್ಯಾ ಪೋಷಕ್ ಮನೆಯನ್ನು ಹಸ್ತಾಂತರ ಮಾಡಲಾಯಿತು.