ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವರಿಗೆ ಹಸಿರು ಹೊರೆ ಕಾಣಿಕೆ ಸಮರ್ಪಣೆ
![](https://kundapurtimes.com/wp-content/uploads/2024/03/WhatsApp-Image-2024-03-11-at-12.38.46-AM-2-1024x462.jpeg)
![](https://kundapurtimes.com/wp-content/uploads/2024/03/WhatsApp-Image-2024-03-11-at-12.38.46-AM-1-1024x462.jpeg)
![](https://kundapurtimes.com/wp-content/uploads/2024/03/WhatsApp-Image-2024-03-11-at-12.38.46-AM-1024x580.jpeg)
![](https://kundapurtimes.com/wp-content/uploads/2024/03/WhatsApp-Image-2024-03-11-at-12.38.47-AM-2-1024x513.jpeg)
![](https://kundapurtimes.com/wp-content/uploads/2024/03/WhatsApp-Image-2024-03-11-at-12.38.47-AM-1024x789.jpeg)
ಕುಂದಾಪುರ:ಜಗತ್ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ನೂತನ ಶಿಲಾಮಯ ದೇಗುಲ ಲೋಕಾರ್ಪಣೆ,ಬ್ರಹ್ಮಕಲಶೋತ್ಸವ,ಲಕ್ಷಮೋದಕ ಹೋಮ,ಶತ ಚಂಡಿಯಾಗ,2016 ಗಣಹೋಮ ಕಾರ್ಯಕ್ರಮದ ಅಂಗವಾಗಿ ಹಸಿರು ಹೊರೆ ಕಾಣಿಗೆ ಹಾಗೂ ಬೆಳ್ಳಿ ರಥ ಮೆರವಣಿಗೆ ಭಾನುವಾರ ಅದ್ದೂರಿಯಾಗಿ ನಡೆಯಿತು.
ಶ್ರೀದೇವರ ಬೆಳ್ಳಿ ರಥ ಮೆರವಣಿಗೆ ಹಾಗೂ ಹಸಿರು ಹೊರೆ ಕಾಣಿಕೆ ಮೆರವಣಿಗೆ ಅಂಗವಾಗಿ ಭಜನಾ ತಂಡಗಳಿಂದ ಭಜನಾ ಕುಣಿತ,ಚೆಂಡೆವಾದನ,ವಾದ್ಯಗೋಷ್ಠಿ,ನಾಶಿಕ್ ಡೋಲು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತು.ಮಹಿಳೆಯರು ಪೂರ್ಣಕುಂಭ ಕಳಶದೊಂದಿಗೆ ಶ್ರೀದೆವರ ಬೆಳ್ಳಿರಥ ಹಾಗೂ ಹಸಿರು ಹೊರೆ ಕಾಣಿಕೆಯನ್ನು ಬರಮಾಡಿಕೊಂಡರು.
ಶ್ರೀಹಟ್ಟಿಯಂಗಡಿ ದೇವಸ್ಥಾನದ ಧರ್ಮದರ್ಶಿಗಳಾದ ಹೆಚ್.ಬಾಲಚಂದ್ರ ಭಟ್ಟ ಮಾತನಾಡಿ,ನೂತನ ದೇವಾಲಯ ಲೋಕರ್ಪಣೆ ಮತ್ತು ಬ್ರಹ್ಮಕಲಶೋತ್ಸವ ಅಂಗವಾಗಿ ಹೊರೆ ಕಾಣಿಕೆಯನ್ನು ನೀಡಿದ ಗ್ರಾಮಸ್ಥರು ಹಾಗೂ ಎಲ್ಲಾ ಭಕ್ತಾಭಿಮಾನಿಗಳಿಗೆ ಶ್ರೀ ಸಿದ್ಧಿವಿನಾಯಕ ದೇವರು ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.ಮಾರ್ಚ್ 13 ರಿಂದ ಮಾರ್ಚ್ 17 ರ ತನಕ ನಡೆಯಲಿರುವ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ರಮಾದೇವಿ ರಾಮಚಂದ್ರ ಭಟ್ಟ,ಪದಾಧಿಕಾರಿಗು,ಗ್ರಾಮಸ್ಥರು ,ಕಾರ್ಯಕ್ರಮದ ಮೇಲ್ವಿಚಾರಕರು ಉಪಸ್ಥಿತರಿದ್ದರು.