ಶ್ರೀಗುಹೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನೆ
![](https://kundapurtimes.com/wp-content/uploads/2023/10/WhatsApp-Image-2023-10-09-at-9.22.12-PM-1024x495.jpeg)
![](https://kundapurtimes.com/wp-content/uploads/2023/10/WhatsApp-Image-2023-10-09-at-9.22.38-PM-2-1024x768.jpeg)
ಕುಂದಾಪುರ:ಸಾವಿರಾರು ವರ್ಷಗಳ ಕಾಲ ಇತಿಹಾಸವನ್ನು ಹೊಂದಿರುವ ಕುಂದಾಪುರ ತಾಲೂಕಿನ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದ ಪ್ರಯುಕ್ತ ಅಷ್ಟಮಂಗಳ ಪ್ರಶ್ನೆ ಚಿಂತನಾ ಕಾರ್ಯಕ್ರಮ ಕೇರಳದ ಪ್ರಸಿದ್ಧ ದೈವಜ್ಞರಾದ ಶ್ರೀ ನಾರಾಯಣ ನಂಬೂದಿರಿ ಕೈಮುಕ್ಕು ಅವರ ಮಾರ್ಗದರ್ಶನದಲ್ಲಿ ದೇವರ ಸನ್ನಿಧಾನದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.
ತಂತ್ರಿಗಳಾದ ಕುಮಾರು ಗುರು ಕೊರಂಗ್ರಪಾಡಿ,ಶ್ರೀಶ ಭಟ್ ಹೊಸಾಡು ಮತ್ತು ಇತರ ದೈವಜ್ಞರು ಸಹಕರಿಸಿದರು,ದೇವಳದ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.ಭಾನುವಾರ ಆರಂಭಗೊಂಡ ಅಷ್ಟಮಂಗಳ ಪ್ರಶ್ನೆ ಮಂಗಳವಾರ ಸಮಾಪ್ತಿಗೊಳ್ಳಲಿದೆ.
![](https://kundapurtimes.com/wp-content/uploads/2023/10/WhatsApp-Image-2023-10-09-at-9.22.38-PM-1-1024x768.jpeg)