ಸ್ಪಂದನ ಸಂಜೀವಿನಿ ಒಕ್ಕೂಟ ಸದಸ್ಯರಿಂದ ಗದ್ದೆ ನಾಟಿ

Share

Advertisement
Advertisement
Advertisement

ಕುಂದಾಪುರ:ಜಿಲ್ಲಾ ಪಂಚಾಯತ್ ಉಡುಪಿ,ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ,ಕೃಷಿ ಇಲಾಖೆ ಉಡುಪಿ ಜಿಲ್ಲೆ,ತಾಲೂಕು ಪಂಚಾಯತ್ ಕುಂದಾಪುರ,ಗ್ರಾಮ ಪಂಚಾಯತ್ ಹಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಡಿಲು ಭೂಮಿಗೆ ಮರುಜೀವ ನೀಡುವ ಕಾರ್ಯಕ್ರಮದ ಅಂಗವಾಗಿ ನಿರ್ಜೀವ ಸ್ಥಿತಿಯಲ್ಲಿದ್ದ ಭೂಮಿಯಲ್ಲಿ ಸ್ಪಂದನ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಂದ ಗದ್ದೆ ನಾಟಿ ಕಾರ್ಯ ನಡೆಯಿತು.

ಸಂಜೀವಿನಿ ಸಂಘಗಳ ತಾಲೂಕು ಒಕ್ಕೂಟ ಅಧ್ಯಕ್ಷ ವಿಜಯ ಗಾಣಿಗ ಮಾತನಾಡಿ,ಹಡಿಲು ಭೂಮಿಗಳಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಕೆಲಸ ಕಾರ್ಯಗಳು ಶ್ಲಾಘನೀಯವಾದದು ಕೃಷಿ ಕ್ಷೇತ್ರದ ಬಗ್ಗೆ ಮಹಿಳೆಯರಿಗೆ ಇನ್ನಷ್ಟು ಕಾಳಜಿ ಮೂಡುವಂತೆ ಮಾಡಿದೆ ಎಂದರು.ಹಂಗಳೂರು ಗ್ರಾಮ ಪಂಚಾಯತ್ ಅದ್ಯಕ್ಷ ಆನಂದ ಚಾಲನೆಯನ್ನು ನೀಡಿ ಶುಭಹಾರೈಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಮತ್ತು ಸಿಬ್ಬಂದಿಗಳು,ಎನ್‍ಆರ್‍ಎಲ್‍ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯತೀಶ್,ಕೃಷಿ ವ್ಯವಸ್ಥಾಪಕಿ ಸಂತೃಪ್ತಿ,ಸ್ಪಂದನ ಒಕ್ಕೂಟ ಅಧ್ಯಕ್ಷೆ ಜಯಂತಿ,ಕಾರ್ಯದರ್ಶಿ ಸವಿತ,ಸುಜಾಜ,ಜ್ಯೋತಿ,ಪುಷ್ಪ,ಜಯಲಕ್ಷ್ಮೀ,ಅನಿತಾ,ಸಂಜೀವಿನಿ ಸಂಘದ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.ಎಂಬಿಕೆ ಶೋಭಾ ನಿರೂಪಿಸಿ,ವಂದಿಸಿದರು.

Advertisement


Share

Leave a comment

Your email address will not be published. Required fields are marked *

You cannot copy content of this page