ಬೆಂಗಳೂರು:ಮೀನುಗಾರರ ಮುಖಂಡರ ವಿಶೇಷ ಸಭೆ

Share

Advertisement
Advertisement
Advertisement

ಕುಂದಾಪುರ:ಬಂದರು ಮತ್ತು ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಕರಾವಳಿ ಭಾಗದ ಮೀನುಗಾರರ ಮುಖಂಡರ ವಿಶೇಷ ಸಭೆಯು ಬೆಂಗಳೂರು ಕುಮಾರ ಕೃಪಾದಲ್ಲಿ ಗುರುವಾರ ನಡೆಯಿತು.
ಗಂಗೊಳ್ಳಿ ಬಂದರು ಜಟ್ಟಿ ದುರಸ್ತಿ ಹಾಗೂ ಮಹಿಳಾ ಮೀನುಗಾರರ ವಿಶ್ರಾಂತಿ ಕೊಠಡಿ ನಿರ್ಮಾಣದ ಕುರಿತು ಮತ್ತು ಹರಾಜು ಪ್ರಾಂಗಣದ ಅಭಿವೃದ್ಧಿ ಬಗ್ಗೆ ಸಚಿವರಿಗೆ ಮನವರಿಕೆ ಮಾಡಲಾಯಿತು.ನಾಡದೋಣಿ ಮೀನುಗಾರರ ಸೀಮೆಎಣ್ಣೆ ಸಬ್ಸಿಡಿ ಹೆಚ್ಚಳಕ್ಕೆ ಮನವಿಯನ್ನು ನೀಡಲಾಯಿತು.ಮೀನುಗಾರರ ನಾನಾ ಸಮಸ್ಯೆಗಳನ್ನು ಚರ್ಚಿಸಲಾಯಿತು.ಈ ಸಂದರ್ಭ ಉಡುಪಿ ಶಾಸಕ ಯಶಪಾಲ್ ಸುವರ್ಣ,ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಗಳು,ನಿರ್ದೇಶಕರು,ಗಂಗೊಳ್ಳಿ ಪ್ರಾಥಮಿಕ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು,ಯಶವಂತ್ ಗಂಗೊಳ್ಳಿ,ರಮೇಶ್ ಕುಂದರ್,ರಾಘವೇಂದ್ರ ಖಾರ್ವಿ,ಆನಂದ ಖಾರ್ವಿ ಉಪ್ಪÅಂದ,ಅಧಿಕಾರಿಗಳು ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page