ಡಾ. ಎ.ರಾಧಾಕೃಷ್ಣ ಕೊಡ್ಗಿಗೆ ಸನ್ಮಾನ
ಕುಂದಾಪುರ:ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ವೈದ್ಯರಾದ ಡಾ.ಎ.ರಾಧಾಕೃಷ್ಣ ಕೊಡ್ಗಿ ಅವರನ್ನು ಗೌರವಿಸಲಾಯಿತು.
ಗಂಗೊಳ್ಳಿ ರೋಟರಿ ಕ್ಲಬ್ನ ನಿರ್ಗಮಿತ ಅಧ್ಯಕ್ಷೆ ಸುಗುಣ ಆರ್.ಕೆ,ಗಂಗೊಳ್ಳಿ ಟೌನ್ ಸಹಕಾರಿ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ,ಚಂದ್ರಕಲಾ,ಉಮೇಶ ಮೇಸ್ತ,ಜನಾರ್ದನ ಪೂಜಾರಿ ಪೆರಾಜೆ, ಉದಯಶಂಕರ ರಾವ್,ಬಿ.ಲಕ್ಷ್ಮೀಕಾಂತ ಮಡಿವಾಳ,ದಯಾನಂದ ಗಾಣಿಗ,ಪ್ರದೀಪ ಡಿ.ಕೆ,ಗಂಗೊಳ್ಳಿ ರೋಟರಿ ಸದಸ್ಯರು ಉಪಸ್ಥಿತರಿದ್ದರು.ಕ್ಲಬ್ಬಿನ ಅಧ್ಯಕ್ಷ ಎಂ.ನಾಗೇಂದ್ರ ಪೈ ಸ್ವಾಗತಿಸಿದರು.ಕೆ.ರಾಮನಾಥ ನಾಯಕ್ ನಿರೂಪಿಸಿದರು.ಕೃಷ್ಣ ಪೂಜಾರಿ ವಂದಿಸಿದರು.