ಬೈಂದೂರು ಬಿಜೆಪಿ,ಚುನಾವಣಾ ಪೂರ್ವ ಮಾಹಿತಿ ಕಾರ್ಯಾಗಾರ
![](https://kundapurtimes.com/wp-content/uploads/2024/03/WhatsApp-Image-2024-03-30-at-7.18.58-PM-2-1024x462.jpeg)
![](https://kundapurtimes.com/wp-content/uploads/2024/03/WhatsApp-Image-2024-03-30-at-7.18.58-PM-1024x462.jpeg)
![](https://kundapurtimes.com/wp-content/uploads/2024/03/WhatsApp-Image-2024-03-30-at-7.18.58-PM-1-1024x576.jpeg)
ಕುಂದಾಪುರ:ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಮಹಿಳಾ ಕಾರ್ಯಕರ್ತರಿಗೆ ಲೋಕಸಭಾ ಚುನಾವಣಾ ಮಾಹಿತಿ ಕಾರ್ಯಾಗಾರ ಜಯಶ್ರೀ ಸಭಾಭವನ ಹೆಮ್ಮಾಡಿಯಲ್ಲಿ ಶನಿವಾರ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಅವರು ಮಹಿಳಾ ಕಾರ್ಯಕರ್ತರಿಗೆ ಚುನಾವಣಾ ಪೂರ್ವ ತಯಾರಿ ಬಗ್ಗೆ ಮಾಹಿತಿಯನ್ನು ನೀಡಿದರು.ಕರ್ನಾಟಕದ ಆರು ಲೋಕಸಭಾ ಕ್ಷೇತ್ರದ ಪ್ರಭಾರಿಗಳಾಗಿರುವ ಭಾನುಪ್ರಕಾಶ್ ಜೀ,ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ,ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್,ಪ್ರಧಾನ ಕಾರ್ಯದರ್ಶಿ ಅನಿತಾ ಆರ್.ಕೆ,ಬೈಂದೂರು ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲ ಕುಂದರ್,ಪ್ರೇಮ ಪೂಜಾರಿ ಉಸ್ಥಿತರಿದ್ದರು.ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭಾರತಿ ಶೇಟ್ ಸ್ವಾಗತಿಸಿದರು.ಸುಜಾತ ಮರವಂತೆ ನಿರೂಪಿಸಿದರು.ದೀಪ ಶೆಟ್ಟಿ ವಂದಿಸಿದರು.
ವರದಿ-ಅಲ್ಪಾಜ್
ನಮ್ಮ ಜಾಲಾತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ-9141825696