ಓದಿನಲ್ಲಿ ಕ್ಷಮತೆಯನ್ನು ತೋರಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ:ಡಾ.ಶುಭಕರ ಆಚಾರ್ಯ
ಓದಿನಲ್ಲಿ ಕ್ಷಮತೆಯನ್ನು ತೋರಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ
![](https://kundapurtimes.com/wp-content/uploads/2023/11/WhatsApp-Image-2023-11-11-at-3.16.16-PM-1-1024x452.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.29-PM-1024x576.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.32-PM-1024x576.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.33-PM-1024x576.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.30-PM-1024x576.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.38-PM-1024x576.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.37-PM-1024x576.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.37-PM-1-1024x576.jpeg)
ಹೆಮ್ಮಾಡಿ:ತಮ್ಮೊಳಗೆ ಅಡಗಿರುವ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರ್ಪಡಿಸುವುದೆ ಶಿಕ್ಷಣವಾಗಿದೆ ವಿದ್ಯಾರ್ಥಿಗಳು ಓದಿನಲ್ಲಿ ಸರಿಯಾದ ರೀತಿಯ ಕ್ಷಮತೆಯನ್ನು ತೋರಿಸಿದಾಗ ಮಾತ್ರ ಅಪೂರ್ವವಾದ ಸಾಧನೆಯನ್ನು ಮಾಡಲು ಸಾಧ್ಯವಿದೆ.ಜಗತ್ತನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕೆ ಇದೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ಶುಭಕರ ಆಚಾರ್ಯ ಅಭಿಪ್ರಾಯಪಟ್ಟರು.
ಕುಂದಾಪುರ ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಜನತಾ ಸಂಭ್ರಮ 2ಕೆ23 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ,ಶಿಕ್ಷಕ ವೃತ್ತಿಯನ್ನು ಆಯ್ಕೆಮಾಡಿಕೊಂಡು ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಶಿಕ್ಷಕರೆ ನಿಜವಾದ ದೇವರು.ಸ್ಪರ್ಧಾತ್ಮಕಯುಗದಲ್ಲಿ ವಿದ್ಯಾರ್ಥಿಗಳು ಕೌಶಲ್ಯವರ್ಧಿತ ಶಿಕ್ಷಣವನ್ನು ಪಡೆಯುವುದು ಕೂಡ ಅತಿಮುಖ್ಯವಾಗಿದೆ ಎಂದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್ ಮಾತನಾಡಿ,ಹೆತ್ತವರ ಶ್ರಮ ಶಿಕ್ಷಕರ ಪರಿಶ್ರಮವನ್ನು ಅರಿತುಕೊಂಡಾಗ ಮಾತ್ರ ವಿದ್ಯೆಯ ಮಹತ್ವ ಏನು ಎನ್ನುವುದು ಅರಿವಿಗೆ ಬರುತ್ತದೆ.ಬೈಂದೂರು ವಲಯದಲ್ಲಿ ಒಂದು ಉತ್ತಮವಾದ ಕಾಲೇಜನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಜನತಾ ಕಾಲೇಜಿನ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಖ್ಯಾತ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಮಾತನಾಡಿ,ಉತ್ತಮವಾದ ಅಂಕಗಳನ್ನು ಗಳಿಸಲು ಏಕಾಗ್ರತೆ ಮತ್ತು ಆತ್ಮವಿಶ್ವಾಸ ಎನ್ನುವುದು ಅತಿ ಮುಖ್ಯವಾಗಿದೆ.ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಕೊಳ್ಳಬೇಕೆಂದು ಕಿವಿ ಮಾತನ್ನು ಹೇಳಿದರು.
ಕಾಲೇಜಿನ ಪ್ರಿನ್ಸಿಪಾಲ್ ಗಣೇಶ ಮೊಗವೀರ ಮತ್ತು ವೈಸ್ ಪ್ರಿನ್ಸಿಪಾಲ್ ರಮೇಶ ಪೂಜಾರಿ,ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ,ಡ್ರಾಮ ಜುನೀಯರ್ ವಿಜೇತೆ ಸಮೃದ್ಧಿ.ಎಸ್ ಮೊಗವೀರ,ಕಾಲೇಜಿನ ಸಂಚಾಲಕಿ ಚಿತ್ರಾ ಕಾರಂತ,ಜನತಾ ಹೈಸ್ಕೂಲ್ ಮುಖ್ಯೋಪಾಧ್ಯಾಯ ಮಂಜು ಕಾಳವಾರ ಉಪಸ್ಥಿತರಿದ್ದರು.ಪ್ರಿನ್ಸಿಪಾಲ್ ಗಣೇಶ್ ಮೊಗವೀರ ಸ್ವಾಗತಿಸಿ,ವಾರ್ಷಿಕ ವರದಿ ಮಂಡಿಸಿದರು.ಉಪನ್ಯಾಸಕ ಉದಯ ನಾಯ್ಕ್ ನಿರೂಪಿಸಿದರು.ಉಪನ್ಯಾಸಕಿ ಪ್ರಿಯಾಂಕ ವಂದಿಸಿದರು.ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
(ಕುಂದಾಪುರ ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜನತಾ ಸಂಭ್ರಮ 2ಕೆ23 ಕಾರ್ಯಕ್ರಮ ನಡೆಯಿತು)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.27-PM-1024x461.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.36-PM-1-1024x576.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.35-PM-1024x461.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.34-PM-1024x576.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.34-PM-1-1024x576.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.20-PM-1024x461.jpeg)
![](https://kundapurtimes.com/wp-content/uploads/2023/11/WhatsApp-Image-2023-11-11-at-3.18.24-PM-1024x461.jpeg)