ಶ್ರೀಶಾರದ ಸದ್ವಿದ್ಯಾ ಕುಮಾರಿ ಶಿಕ್ಷಣ ಶಿಬಿರ ಉದ್ಘಾಟನೆ

ಬೈಂದೂರು:ತಾಲೂಕಿನ ನಾವುಂದ ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ಶ್ರೀಶಾರದ ಸದ್ವಿದ್ಯಾ ಕುಮಾರಿ ಶಿಕ್ಷಣ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.ಮಾಧವ ಅಡಿಗ ಅವರು ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು.ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀಶಾರದ ಪೀಠಂ ಶೃಂಗೇರಿ ವೇದ.ಮೂರ್ತಿ ಲೋಕೇಶ್ ಅಡಿಗ ಬಡಾಕೆರೆ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಎಸ್.ಜನಾರ್ದನ ಮರವಂತೆ,ಡಾ.ಗಣೇಶ್ ಈಶ್ವರ ಭಟ್,ವೇದ.ಮೂರ್ತಿ ಉದಯ ವೈದ್ಯ,ಡಾ.ಸುಬ್ರಹ್ಮಣ್ಯ ಉಡುಪ ಆಲೂರು,ವೆಂಕಟೇಶಮೂರ್ತಿ ಎನ್.ಸಿ,ವೇದ.ಮೂರ್ತಿ ಮಂಜುನಾಥ ಹೊಳ್ಳ ಕುಂದಾಪುರ,ವೇದ.ಮೂರ್ತಿ ಗಣೇಶ ಭಟ್ಟ್ ಬನ್ನಾಡಿ,ಶ್ರೀಧರ ಮಂಜರು ನೇರಳಕಟ್ಟೆ ಉಪಸ್ಥಿತರಿದ್ದರು.ವೇದ ಮೂರ್ತಿ ಲಕ್ಷ್ಮೀಶ ಅಡಿಗ ಸ್ವಾಗತಿಸಿದರು.ವೇದ.ಮೂರ್ತಿ ನಾಗೇಂದ್ರ ಅಡಿಗ ವಂದಿಸಿದರು.ಕುಮಾರಿ ಶಿಕ್ಷಣ ಶಿಬಿರ 14 ದಿನಗಳ ಕಾಲ ನಡೆಯಲಿದೆ.