ಕಂಪ್ಯೂಟರ್ ತರಗತಿ ಕೋಣೆ ಉದ್ಘಾಟನೆ

Share

Advertisement
Advertisement
Advertisement

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2 ಬಗ್ವಾಡಿಯಲ್ಲಿ ಕಂಪ್ಯೂಟರ್ ತರಗತಿ ಉದ್ಘಾಟನೆ ಕಾರ್ಯಕ್ರಮ ಸರಳವಾಗಿ ಶುಕ್ರವಾರ ನಡೆಯಿತು.ಆಭರಣ ಪೌಂಡೇಶನ್ ಶ್ರೀರಂಗನಾಥ್ ಅವರು ಕಂಪ್ಯೂಟರ್ ತರಗತಿ ಕೋಣೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಮಂಜುನಾಥ್ ಪುತ್ರನ್,ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಜೀವ ಶೆಟ್ಟಿ,ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್ ಶೆಟ್ಟಿ,ನಿವೃತ್ತ ಬ್ಯಾಂಕ್ ಅಧಿಕಾರಿ ಸೂಲಿಯಣ್ಣ,ಪುರೋಹಿತರಾದ ಮಂಜುನಾಥ್ ಭಟ್ ಹರೇಗೋಡು,ಎಸ್‍ಡಿಎಂಸಿ ಸದಸ್ಯರು,ಹಳೆ ವಿದ್ಯಾರ್ಥಿಗಳು,ಅಂಗನವಾಡಿ ಕಾರ್ಯಕರ್ತೆಯರು,ಶಿಕ್ಷಕವೃಂದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಶೈಲಜಾ ಶೆಟ್ಟಿ ಸ್ವಾಗತಿಸಿದರು.ಗೌರವ ಶಿಕ್ಷಕಿ ಸ್ವಾತಿ ನಿರೂಪಿಸಿದರು.ಸಹಶಿಕ್ಷಕಿ ಸತ್ಯವತಿ ವಂದಿಸಿದರು.ಆಭರಣ ಪೌಂಡೇಶನ್‍ನ ಸಿಎಸ್‍ಆರ್ ನಿಧಿಯಿಂದ 1.68 ಲಕ್ಷ.ರೂ ಮೌಲ್ಯದ 5 ಕಂಪ್ಯೂಟರ್‍ನ್ನು ಸರಕಾರಿ ಶಾಲೆಗೆ ಕೊಡುಗೆ ಆಗಿ ನೀಡಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page