ಫೆ.20 ರಿಂದ ಶ್ರೀ ಬಗಳಾಂಬ ತಾಯಿ ದೇವಸ್ಥಾನ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ
![](https://kundapurtimes.com/wp-content/uploads/2024/02/WhatsApp-Image-2024-02-04-at-8.24.21-PM.jpeg)
ಕುಂದಾಪುರ:ಶ್ರೀ ಬಗಳಾಂಬ ತಾಯಿ ದೇವಸ್ಥಾನ ಚಿಕ್ಕನ್ಸಾಲ್ ರಸ್ತೆ ಕುಂದಾಪುರ ಇದರ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆ ಕಾರ್ಯಕ್ರಮ ಫೆ. 20 ರಿಂದ ಆರಂಭಗೊಂಡು ಫೆ.23 ರ ತನಕ ನಡೆಯಲಿದೆ.
ಶ್ರೀ ಬಗಳಾಂಬ ತಾಯಿ ಪುನರ್ ಪ್ರತಿಷ್ಠೆ,ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 20 ರಂದು ಗುರುಸನ್ನಿಧಿಯಲ್ಲಿ ಕಲಾಭಿವೃದ್ಧಿ ಹೋಮ,ಕಲಶಾಭಿಷೇಕ ಸಂಜೆ 5.ಕ್ಕೆ ಶ್ರೀ ಬಗಳಾಂಬ ತಾಯಿಯ ಕಲಾಸಂಕೋಚ ನಡೆಯಲಿದೆ.
![](https://kundapurtimes.com/wp-content/uploads/2024/02/WhatsApp-Image-2024-02-04-at-8.24.20-PM-1.jpeg)
ಫೆಬ್ರವರಿ 21 ರಂದು ಶ್ರೀ ಕಾಲಭೈರೇಶ್ವರ,ಶ್ರೀ ಅಂಜನೇಯ ಶ್ರೀ ನಾಗದೇವರಿಗೆ ಕಲಶಾಭಿಷೇಕ,ಸತ್ಯನಾರಾಯಣ ಪೂಜೆ.
ಫೆಬ್ರವರಿ 22 ರಂದು ಬೆಳಿಗ್ಗೆ 5.20 ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ರತ್ನನ್ಯಾಸಪೂರ್ವಕ ಶ್ರೀ ಬಗಳಾಂಬ ತಾಯಿಯ ಪುನರ್ ಪ್ರತಿಷ್ಠೆ ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣೆ ಜರುಗಲಿದೆ.
ಫೆಬ್ರವರಿ 23 ರಂದು ಬೆಳಿಗ್ಗೆ 7.ಕ್ಕೆ ಚಂಡಿಕಾಯಾಗ,ಬ್ರಹ್ಮಕಲಶಾಭಿಷೇಕ,ಮಧ್ಯಾಹ್ನ 12.30 ಕ್ಕೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ನೋಟ
ಫೆ.21 ಬುಧವಾರ ರಾತ್ರಿ 8.ಕ್ಕೆ ಭಕ್ತಿ-ಭಾವ-ನಾಟ್ಯ
ಫೆ.22 ಗುರುವಾರ ರಾತ್ರಿ 8.ಕ್ಕೆ ಯಕ್ಷಗಾನ ಪ್ರದರ್ಶನ-ಚಕ್ರ ಚಂಡಿಕೆ
ಫೆ.23 ಶುಕ್ರವಾರ ರಾತ್ರಿ 8.ಕ್ಕೆ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ಜರುಗಲಿದೆ.