ವೈದ್ಯರ ದಿನಾಚರಣೆ, ಸನ್ಮಾನ ಕಾರ್ಯಕ್ರಮ

Share

Advertisement
Advertisement
Advertisement

ಕುಂದಾಪುರ:ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿಯವರು,ಸಿದ್ಧಾಪುರದಲ್ಲಿ ಕಳೆದ ಎರಡುವರೆ ದಶಕಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಜಗದೀಶ್ ಶೆಟ್ಟಿ ಹಾಗೂ ಸಿದ್ಧಾಪುರ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ದೀಕ್ಷಾ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು.
ವಿಶ್ರಾಂತ ಉಪನ್ಯಾಸಕರಾದ ಡಾ. ಶ್ರೀಕಾಂತ್ ರಾವ್ ಮಾತನಾಡಿ,ವೈದ್ಯೋ ನಾರಾಯಣ ಹರಿ ಎಂಬಂತೆ ದೇವರು ಕೊಡುವುದು ಜನ್ಮ,ವೈದ್ಯರು ನೀಡುವುದು ಮರುಜನ್ಮ.ರೋಗಿಗಳ ಕಣ್ಣಿಗೆ ವೈದ್ಯರು ದೇವರ ರೂಪದಲ್ಲಿ ಕಾಣುತ್ತಾರೆ ರೋಗಿಯ ಆತ್ಮಸ್ಥೈರ್ಯ ದಿಂದ ಮಾನಸಿಕವಾಗಿ ಸದೃಢರಾಗಿ ಆಯುಷ್ಯ ವ್ರದ್ದಿಯಾಗುತ್ತದೆ ಎಂದರು.
ಉದ್ಯಮಿಗಳಾದ ಶ್ರೀಕಾಂತ್ ನಾಯಕ್,ಎಸ್.ಪಾಂಡುರಂಗ ಪೈ,ಟಿ.ಜಿ.ಪಾಂಡುರಂಗ ಪೈ, ಭೋಜರಾಜ್ ಶೆಟ್ಟಿ,ಆರೋಗ್ಯ ಕೇಂದ್ರದ ಕಿರಣ್ ಶೆಟ್ಟಿ,ಶಿಕ್ಷಕ ಪ್ರತಾಪ್ ಕಿಣಿ,ರಾಜೇಂದ್ರ ಬೆಚ್ಚಳ್ಳಿ ಉಪಸ್ಥಿತರಿದ್ದರು. ಆರೋಗ್ಯ ಕಾರ್ಯಕರ್ತರು ಸಿಬ್ಬಂದಿ,ಆಂಗನವಾಡಿ ಶಿಕ್ಷಕರು ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page