ಹರ್ಕೂರು ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಮಹೋತ್ಸವ
![](https://kundapurtimes.com/wp-content/uploads/2024/03/WhatsApp-Image-2024-03-27-at-9.24.25-PM-1-1024x576.jpeg)
![](https://kundapurtimes.com/wp-content/uploads/2024/03/WhatsApp-Image-2024-03-27-at-9.24.25-PM-1024x576.jpeg)
![](https://kundapurtimes.com/wp-content/uploads/2024/03/WhatsApp-Image-2024-03-27-at-9.25.23-PM-1024x576.jpeg)
![](https://kundapurtimes.com/wp-content/uploads/2024/03/WhatsApp-Image-2024-03-27-at-9.24.24-PM-1-1024x683.jpeg)
![](https://kundapurtimes.com/wp-content/uploads/2024/03/WhatsApp-Image-2024-03-27-at-9.25.22-PM-1024x576.jpeg)
ಕುಂದಾಪುರ:ತಾಲೂಕಿನ ಹರ್ಕೂರು ಗ್ರಾಮದ ಶ್ರೀಮಹಾಗಣಪತಿ ದೇವರ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ವೃಷಭ ಲಗ್ನ ಸುಮುಹೂರ್ತದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.ಶ್ರೀಮಹಾಗಣಪತಿ ದೇವರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜೀವ ಕುಂಭಾಬಿಷೇಕ,ಪ್ರತಿಷ್ಠಾ ಕಲಶಾಭಿಷೇಕ,ಮಹಾಪೂಜೆ,ಪ್ರಾಯಶ್ಚಿತ ಹೋಮ,ಶಿಖರ ಪ್ರತಿಷ್ಠೆ,ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.ಶ್ರೀದೇವರಿಗೆ ಬೆಳ್ಳಿ ಪ್ರಭಾವಳಿ ಮತ್ತು ಬೆಳ್ಳಿ ಮುಖವಾಡವನ್ನು ಸಮರ್ಪಣೆ ಮಾಡಲಾಯಿತು.ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ವೇದ ಬ್ರಹ್ಮ ಹೃಷಿಕೇಶ ಬಾಯರಿ ಬಾರ್ಕೂರು ಹಾಗೂ ವೇದ ಮೂರ್ತಿ ಚನ್ನಕೇಶವ ಉಪಾಧ್ಯ ಬಾರಂದಾಡಿ ಅವರ ನೇತೃತ್ವದಲ್ಲಿ ಶ್ರೀದೇವರ ಪ್ರತಿಷ್ಠಾಂಗ ವಿಧಿವಿಧಾನಗಳು ಜರುಗಿತು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎಚ್.ಜಯಶೀಲ ಎನ್ ಶೆಟ್ಟಿ ಮಾತನಾಡಿ,ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಹಾಗೂ ಪ್ರತಿಷ್ಠಾ ಕಲಶಾಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀದೇವರ ಆರ್ಶೀವಾದದಿಂದ ನಿರ್ವಿಘ್ನವಾಗಿ ನಡೆದಿದೆ ಎಂದು ಹೇಳಿದರು.ಮಾರ್ಚ್ 28 ರ ಗುರುವಾರ ದಂದು ಶ್ರೀಕ್ಷೇತ್ರದಲ್ಲಿ ನಡೆಯುವ ಶ್ರೀಮಹಾಗಣಪತಿ ದೇವರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿನಂತಿಸಿಕೊಂಡರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ,ಗಣಪತಿ ದೇವರ ಆರಾಧನೆಯಿಂದ ನಮ್ಮ ಇಷ್ಟಾರ್ಥಗಳನ್ನು ಪಡೆಯಬಹುದಾಗಿದ್ದು ಪ್ರಥಮ ಪೂಜಿತ ಗಣಪನಿಗೆ ಅಗ್ರಸ್ಥಾನವಿದೆ.ಕಲಿಯುಗದಲ್ಲಿ ಕೇಳಿದನ್ನು ಕರುಣಿಸುವ ಶ್ರೀ ಗಣಪತಿ ದೇವರು ಎಲ್ಲಾ ಊರಿನಲ್ಲೂ ಇದ್ದಾನೆ,ಎಲ್ಲರ ಮನೆಯಲ್ಲಿಯೂ ಇದ್ದಾನೆ.ಬಹಳ ವಿಶೇಷವಾದ ರೀತಿಯಲ್ಲಿ ಸಂಕಲ್ಪದಂತೆ ಹರ್ಕೂರು ನಲ್ಲಿ ಶಿಲಾಮಯ ದೇಗುಲ ಲೋಕಾರ್ಪಣೆ ಮಾಡಿರುವುದರಿಂದ ಗ್ರಾಮದ ಜನರಿಗೂ ಒಳ್ಳೆಯದು ಆಗಲಿದೆ ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಜೊತೆ ಕಾರ್ಯದರ್ಶಿ ಪ್ರಸನ್ನಕುಮಾರ ಶೆಟ್ಟಿ ಹೊಸಮನೆ ಮಾತನಾಡಿ,ಊರಿನ ಹಿರಿಯರು,ದಾನಿಗಳು,ಗ್ರಾಮಸ್ಥರ ಸಹಕಾರದಿಂದ ಸುಂದರವಾದ ದೇಗುಲವನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದು ಹೇಳಿದರು.ಇವೊಂದು ದೇಗುಲದ ನಿರ್ಮಾಣದ ಕೆಲಸಲದಲ್ಲಿ ಭಾಗವಹಿಸಿದ ಎಲ್ಲಾರಿಗೂ ಶ್ರೀಮಹಾಗಣಪತಿ ದೇವರು ಒಳಿತನ್ನು ಕುರುಣಿಸಲಿ ಎಂದು ಶುಭಹಾರೈಸಿದರು.
ಅರ್ಚಕರಾದ ಶಿವರಾಮ ಅಡಿಗ ಮಾತನಾಡಿ,ಸುಮಾರು 300 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮವನ್ನು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಗಿದೆ ಎಂದು ಹೇಳಿದರು.ಶ್ರೀಮಹಾಗಣಪತಿ ದೇವರು ಭಕ್ತರ ಎಲ್ಲಾ ಕಾಮನೆಗಳನ್ನು ಈಡೇರಿಕೆ ಮಾಡುವಂತೆ ಹಾರೈಸಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರರಾದ ಕೃಷ್ಣಪ್ರಸಾದ ಅಡ್ಯಂತಾಯ ಮತ್ತು ಸದಾನಂದ ಹೆಗ್ಡೆ ಕಟ್ಟಿನಮಕ್ಕಿ ಹರ್ಕೂರು ಪಟೇಲರ ಮನೆ,ಚುಚ್ಚಿ ನಾರಾಯಣ ಶೆಟ್ಟಿ,ಅಶೋಕ ರಾಜ ಶೆಟ್ಟಿ,ಕಾರ್ಯಾಧ್ಯಕ್ಷ ಮಂಜಯ್ಯ ಶೆಟ್ಟಿ ಹರ್ಕೂರು ಹೊಸಮನೆ,ಗೌರವಾಧ್ಯಕ್ಷರಾದ ಚಿತ್ತರಂಜನ್ ಹೆಗ್ಡೆ ಹರ್ಕೂರು ಪಟೇಲರಮನೆ,ಬೈಂದೂರು ಬಂಟರ ಸಂಘದ ಅಧ್ಯಕ್ಷ ವಸಂತ ಕುಮಾರ್ ಶೆಟ್ಟಿ,ಆನಂದ ಶೆಟ್ಟಿ ಹಳಗೇರಿ ಮನೆ ಹಾಗೂ ಹರ್ಕೂರು ಮೂರು ಮನೆಯವರು,ಗ್ರಾಮಸ್ಥರು ಉಪಸ್ಥಿತರಿದ್ದರು.