ಶ್ರೀರಾಮ ದೇವರಿಗೆ ಹಸಿರು ಹೊರೆ ಕಾಣಿಕೆ ಸಮರ್ಪಣೆ

Share

Advertisement
Advertisement
Advertisement

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ತ್ರಾಸಿ ಕೊಂಕಣಿ ಖಾರ್ವಿ ಸಭಾಭವನದಿಂದ ಹೊಸಪೇಟೆ ಮಾರ್ಗವಾಗಿ ಶ್ರೀರಾಮ ದೇವಸ್ಥಾನದ ವರಗೆ ಅದ್ದೂರಿಯಾಗಿ ಶುಕ್ರವಾರ ನಡೆಯಿತು.
ಚಂಡೆವಾದನ,ಪೂರ್ಣ ಕುಂಭ ಸ್ವಾಗತದೊಂದಿಗೆ ಹಸಿರು ಹೊರೆಕಾಣಿಕೆ ಮೆರವಣಿಗೆಯನ್ನು ಸ್ವಾಗತಿಸಿಕೊಳ್ಳಲಾಯಿತು.ಮಹಿಳೆಯರು,ಪುರುಷರು ಸಮವಸ್ತ್ರವನ್ನು ಧರಿಸಿದ್ದರು.ಸುಮಾರು ಐವತ್ತಕ್ಕೂ ಅಧಿಕ ವಾಹನಗಳು ಹಸಿರು ಹೊರೆ ಕಾಣಿಕೆಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದವು.ಅನ್ನಸಂತರ್ಪಣೆ ಭಜನಾ ಕಾರ್ಯಕ್ರಮ ನಡೆಯಿತು.ಏಪ್ರಿಲ್ 13 ರ ಶನಿವಾರ ದಂದು ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಹೋಮ,ಅನ್ನಸಂರ್ಪಣೆ ಕಾರ್ಯಕ್ರಮ,ಸಂಜೆ ಗಂಗೊಳ್ಳಿ ಶ್ರೀಮಹಾಂಕಾಳಿ ಅಮ್ಮನವರ ಪಲ್ಲಕ್ಕಿ ಉತ್ಸವ ನಡೆಯಲಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page