ಬಾವಿಗೆ ಬಿದ್ದ ಜಿಂಕೆಮರಿ ರಕ್ಷಣೆ
ಕುಂದಾಪುರ:ಜಪ್ತಿ ಗ್ರಾಮದ ಪ್ರಭಾಕರ ಶೆಟ್ಟಿಗಾರ್ ಅವರ ಮನೆಯ ಬಾವಿಗೆ ಆಕಸ್ಮಿಕ ವಾಗಿ ಬಿದ್ದ ಜಿಂಕೆಮರಿ ಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.ಬಾವಿಗೆ ಬಿದ್ದಿದ ಜಿಂಕೆಮರಿಯನ್ನು,ರಕ್ಷಿಸುವಂತೆ ಸ್ಥಳೀಯರು ಅಗ್ನಿಶಾಮಕ ಠಾಣೆಯನ್ನು ಸಂಪರ್ಕಿಸಿದ್ದರು.ಕೂಡಲೆ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ದಿನೇಶ್ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ಅಗ್ನಿಶಾಮಕ ದಳದ ಪ್ರದೀಪ್ ಜಿ.ನಾಯಕ್, ನವೀನ್ಕುಮಾರ್, ರಾಘವೇಂದ್ರ ಬೋವಿ, ಧನುಷ್ ಗೌಡ, ಅಗ್ನಿಶಾಮಕ ಚಾಲಕ ಮುಸ್ತಾಫ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.