ಕಟ್‍ಬೇಲ್ತೂರು:ವಿದ್ಯುತ್ ಸ್ಪರ್ಶಿಸಿ ದಂತಿಗಳಿಬ್ಬರು ದಾರುಣ ಸಾವು

Share

Advertisement
Advertisement
Advertisement

ಕುಂದಾಪುರ:ತುಂಡಾಗಿ ನೆಲಕ್ಕೆ ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗುಲಿ ದಂಪತಿಗಳಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕಟ್‍ಬೇಲ್ತೂರು ಗ್ರಾಮದ ಸುಳ್ಸೆ ಎಂಬಲ್ಲಿ ಶುಕ್ರವಾರ ನಡೆದಿದೆ.ಮಹಾಬಲ ದೇವಾಡಿಗ (55) ಅವರ ಪತ್ನಿ ಲಕ್ಷ್ಮೀ ದೇವಾಡಿಗ (47) ಸಾವನ್ನಪ್ಪಿದ ದುರ್ದೈವಿಗಳು.
ಶುಕ್ರವಾರ ಮಧ್ಯಾಹ್ನ 3.30 ರ ಸುಮಾರಿಗೆ ಮಹಾಬಲ ದೇವಾಡಿಗ ಮತ್ತು ಅವರ ಪತ್ನಿ ಲಕ್ಷ್ಮೀ ದೇವಾಡಿಗ ಎನ್ನುವವರು ಕೆಲಸವನ್ನು ಮುಗಿಸಿಕೊಂಡು ತೆರಳುತ್ತಿರುವ ಸಂದರ್ಭ ಸುಳ್ಸೆ ಕರ್ಣಿಕರ ಮನೆ ಸಮೀಪ ಕಾಲು ದಾರಿಯಲ್ಲಿ ವಿದ್ಯುತ್ ಕಂಬದಿಂದ ಲೈನ್ ತುಂಡಾಗಿ ಕೇಳಕ್ಕೆ ಬಿದ್ದಿದೆ.ಕಾಲು ದಾರಿಯಲ್ಲಿ ಸಾಗುತ್ತಿದ್ದ ಸಮಯದಲ್ಲಿ ನೆಲಕ್ಕೆ ಬಿದ್ದ ವಿದ್ಯುತ್ ತಂತಿಯಿಂದ ಕರೆಂಟ್ ಶಾಕ್ ದಂಪತಿಗಳಿಬ್ಬರಿಗೆ ತಗುಲಿದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ.ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮತ್ತು ಕಾಂಗ್ರೆಸ್ ಮುಖಂಡ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ,ಕುಂದಾಪುರ ಡಿ.ವೈ.ಎಸ್ಪಿ ಬೆಳಿಯಪ್ಪ,ಆರ್.ಐ ರಾಘವೇಂದ್ರ ದೇವಾಡಿಗ ಘಟನೆ ಸ್ಥಳ್ಕಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

Advertisement


Share

Leave a comment

Your email address will not be published. Required fields are marked *

You cannot copy content of this page