ಆಲೂರು:ಮೈದಾನ ನಿರ್ಮಾಣಕ್ಕೆ ಮನವಿ
ಕುಂದಾಪುರ:ಸಾರ್ವಜನಿಕರ ಕೌಶಲ್ಯ ಅಭಿವೃದ್ಧಿಗಾಗಿ ಹಾಗೂ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಮೈದಾನದ ಅವಶ್ಯಕತೆ ಇರುವುದರಿಂದ ಕುಂದಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಸುಸಜ್ಜಿತವಾದ ಮೈದಾನವನ್ನು ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಮೈದಾನ ನಿರ್ಮಾಣಕ್ಕೆ ಜಾಗವನ್ನು ಮೀಸಲು ಇರಿಸುವಂತೆ ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇನ್.ಎನ್ ದೇವಾಡಿಗ ಹಾಗೂ ಪಿಡಿಒ ರೂಪ ಗೋಪಿ ಅವರಿಗೆ ಶ್ರೀರಾಮೇಶ್ವರ ಸ್ಪೋಟ್ರ್ಸ್ ಕ್ಲಬ್ ಆಲೂರು ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಶ್ರೀರಾಮೇಶ್ವರ ಸ್ಪೋರ್ಟ್ ಕ್ಲಬ್ ಉಪಾಧ್ಯಕ್ಷರು ಹಾಗೂ ಪಂಚಾಯತ್ ಸದಸ್ಯರಾದ ಸುಬ್ಬಣ್ಣ ಶೆಟ್ಟಿ ಆಲೂರು,ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಉಡುಪ,ರಾಜೇಶ ಪೂಜಾರಿ,ರಾಘವೇಂದ್ರ ಜೋಯ್ಸಿ,ಯೋಗೀಶ ಪ್ರಭು,ಶಿವರಾಜ ಮೊಗವೀರ,ಸಂತೋಷ ಪೂಜಾರಿ,ಶೋಧನ್ ಉಪಸ್ಥಿತರಿದ್ದರು.