ಸಂಸದ ಬಿ.ವೈ ರಾಘವೇಂದ್ರ,ಸಚಿವ ಗಡ್ಕರಿ ಭೇಟಿ

Share

Advertisement
Advertisement
Advertisement

ಕುಂದಾಪುರ:ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಬೈಂದೂರು ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಚುರುಕು ನೀಡುವಂತೆ ಮನವಿಯನ್ನು ನೀಡಿದರು.ತ್ರಾಸಿ,ಮುಳ್ಳಿಕಟ್ಟೆ,ತಲ್ಲೂರು,ಹೆಮ್ಮಾಡಿ ಜಂಕ್ಷನ್ ಮತ್ತು ಪ್ಲೈವರ್ ಅಭಿವೃದ್ಧಿ,ಬೈಂದೂರು ಜಂಕ್ಷನ್ ಪ್ಲೈವರ್,ಯಡ್ತರೆ ಪ್ಲೈವರ್ ಮತ್ತು ಸರ್ವಿಸ್ ರಸ್ತೆ,ಶಿರೂರು-ನೀರ್ಗದ್ದೆ ವರೆಗೆ ಸರ್ವಿಸ್ ರಸ್ತೆ,ಬಸ್ಸು ನಿಲ್ದಾಣ,ಬೀದಿ ದೀಪ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿ ಕೆಲಸಕ್ಕೆ ವೇಗ ನೀಡುವಂತೆ ಸಂಸದ ಬಿ.ವೈ ರಾಘವೇಂದ್ರ ಅವರು ಕೇಂದ್ರ ಸಚಿವರಿಗೆ ಮನವಿಯನ್ನು ಮಾಡಿದ್ದಾರೆ.ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಸಕರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

Advertisement


Share

Leave a comment

Your email address will not be published. Required fields are marked *

You cannot copy content of this page