ನಾಪತ್ತೆ ಆದ ಯುವಕ,ನದಿಯಲ್ಲಿ ಶವವಾಗಿ ಪತ್ತೆ

Share

Advertisement
Advertisement
Advertisement

ಕುಂದಾಪುರ:ಜಡ್ಕಲ್ ಗ್ರಾಮದ ಮೆಕ್ಕೆ ಕೊಳಹೊಳೆ ಎಂಬಲ್ಲಿ ಜು.23 ರ ಭಾನುವಾರ ದಂದು ನಾಪತ್ತೆ ಆಗಿದ್ದ ಸುರೇಶ (28) ಎನ್ನುವ ಯುವಕನ ಮೃತದೇಹ ಶನಿವಾರ ಕಾನ್ಕಿ ಹಾಸ್ಕಲ್ ಪಾರೆಯ ನದಿಯಲ್ಲಿ ಪತ್ತೆ ಆಗಿದೆ.
ನಿರಂತರವಾಗಿ ಸುರಿಯುತ್ತಿದ್ದ ಭಾರಿ ಮಳೆಯಲ್ಲಿ ಸುರೇಶ ಬಹಿರ್ದೆಸೆಗೆಂದು ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭ ವಾಪಾಸು ಮನೆಗೆ ಬಾರದೆ ನಾಪತ್ತೆ ಆಗಿದ್ದಾನೆ.ನದಿ,ತೋಡುಗಳು ತುಂಬಿ ಹರಿಯುತ್ತಿದ್ದರಿಂದ ಯುವಕ ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕಿಸಲಾಗಿತ್ತು.ಯುವಕನ ಪತ್ತೆಗಾಗಿ ತೀವೃವಾದ ಕಾರ್ಯಾಚರಣೆಯನ್ನು ಮಾಡಲಾಗಿದೆ.ಕೊಲ್ಲೂರು ಠಾಣೆ ಪಿಎಸ್‍ಐ ಜಯಶ್ರೀ ಹೊನ್ನೂರು ಮತ್ತು ಸುಧಾರಾಣಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page