ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಜನ್ಮದಿನಾಚರಣೆ,ಸಮೃದ್ಧ ಹಸಿರು ಕಾರ್ಯಕ್ರಮ
![](https://kundapurtimes.com/wp-content/uploads/2024/05/WhatsApp-Image-2024-05-12-at-9.54.29-PM-1024x576.jpeg)
![](https://kundapurtimes.com/wp-content/uploads/2024/05/WhatsApp-Image-2024-05-12-at-9.54.32-PM-1-1024x576.jpeg)
![](https://kundapurtimes.com/wp-content/uploads/2024/05/WhatsApp-Image-2024-05-12-at-9.54.32-PM-1024x568.jpeg)
ಕುಂದಾಪುರ:ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಜನುಮದಿನ ಅಂಗವಾಗಿ ಅವರ ಅಭಿಮಾನಿಗಳ ಬಳಗದ ವತಿಯಿಂದ ಕ್ಷೇತ್ರದಾದ್ಯಂತ ಸಮೃದ್ಧ ಹಸಿರು ಕಾರ್ಯಕ್ರಮ ಭಾನುವಾರ ನಡೆಯಿತು.
ಸಮೃದ್ಧ ಹಸಿರು ಕಾರ್ಯಕ್ರಮದ ಅಂಗವಾಗಿ ಶಾಸಕರ ಅಭಿಮಾನಿಗಳು ನೂರಾರು ಗಿಡಗಳನ್ನು ನೆಟ್ಟು ಪರಿಸರ ಮೇಲಿನ ಕಾಳಜಿ ಮೆರೆದರು.
ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಕ್ಷೇತ್ರದ ಹಲವೆಡೆ
ರಕ್ತದಾನ ಶಿಬಿರ,ಸ್ವಚ್ಛತಾ ಕಾರ್ಯಕ್ರಮ,ಗಿಡ ನೆಡುವ ಕಾರ್ಯಕ್ರಮ,ಅಸಾಯಕರಿಗೆ ನೆರವು,ವ್ರದ್ಧಾಶ್ರಮ, ಅನಾಥಶ್ರಮ ಗಳಿಗೆ ನೆರವು ನೀಡುವುದಲ್ಲದೆ ಹಳ್ಳಿಗಳಲ್ಲಿ ದುರಸ್ಥಿಯಲ್ಲಿರುವ ಮನೆಗಳನ್ನು ಸರಿಪಡಿಸಿಕೊಡುವ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲೆಗಳ ಮೇಲ್ಚಾವಣಿ ಸರಿದೂಗಿಸುವ ಕಾರ್ಯಗಳನ್ನು ಮಾಡುವುದರ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು.