ದೇವಾಡಿಗ ಅಕ್ಷಯ ಕಿರಣ ಸೇವಾ ಪೌಂಡೇಶನ್ 170ನೇ ಸೇವಾಯಜ್ಞ

Share

Advertisement
Advertisement
Advertisement

ಕುಂದಾಪುರ: ನೊಂದವರ ಬಾಳಿಗೆ ಬೆಳಕಾಗುತ್ತಿರುವ ದೇವಾಡಿಗ ಅಕ್ಷಯ ಕಿರಣದ ವತಿಯಿಂದ
169 ನೆ ಸೇವಾಕಾರ್ಯದ ಅಂಗವಾಗಿ ಮುಂಬೈನ ಕಾಂದಿವಿಲಿಯಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಶ್ರೀನಿವಾಸ್ ದೇವಾಡಿಗರ ಮನೆಗೆ ತೆರಳಿ 40,000/- ಸಹಾಯ ಧನವನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಮುಂಬೈನ ಸೇವಾದಾರರುಗಳಾದ ಶ್ರೀ ಅಶೋಕ್ ದೇವಾಡಿಗ, ಪೋವಾಯಿ, ಪರಮೇಶ್ವರ್ ದೇವಾಡಿಗ, ನಾಯ್ಕ್ ನಕಟ್ಟೆ, ದಯಾನಂದ ದೇವಾಡಿಗ ನೆರೂಲ್, ವಿಠ್ಠಲ್ ದೇವಾಡಿಗ, ಅಂಧೇರಿ,ಗಣೇಶ್ ಎಸ್. ಬ್ರಹ್ಮಾವರ್ ಮತ್ತು ಸ್ಥಳೀಯರಾದ ಭಾಸ್ಕರ್ ದೇವಾಡಿಗರು ಮತ್ತು ವನಿತಾ ದೇವಾಡಿಗರು ಉಪಸ್ಥಿತರಿದ್ದರು.

170 ನೇ ಸೇವಾ ಕಾರ್ಯದ ಅಂಗವಾಗಿ ಬೈಂದೂರು ಸಮೀಪದ ಉಪ್ಪುಂದದಲ್ಲಿ
ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಕುಮಾರ್ ಮಹೇಶ್ ದೇವಾಡಿಗ, ಹೂಗಿಮನೆ ಅವರ ತುರ್ತು ವೈದ್ಯಕೀಯ ಚಿಕಿತ್ಸೆಗೆ ಸುಮಾರು 50,000.ರೂ ಧನ ಸಹಾಯವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ನಾಗಚಂದ್ರ ದೇವಾಡಿಗ,ಚಂದ್ರ ದೇವಾಡಿಗ, ನಾಯಕನಕಟ್ಟೆ, ಮಧುಕರ್ ದೇವಾಡಿಗ, ನಾಗೇಂದ್ರ ದೇವಾಡಿಗ, ರಾಘವೇಂದ್ರ ದೇವಾಡಿಗ,ಮಹಾಲಿಂಗ ದೇವಾಡಿಗ, ಪುರುಷೋತ್ತಮ ದಾಸ್,ರಾಮ ದೇವಾಡಿಗ ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page