ಗಾಂಚಾ ಮಾರಾಟಕ್ಕೆ ಯತ್ನ, ತ್ರಿಪುರಾ ಮೂಲದ ಇಬ್ಬರು ಯುವಕರು ಅರೆಸ್ಟ್

Share

Advertisement
Advertisement
Advertisement

ಮಂಗಳೂರು:ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ತ್ರಿಪುರ ಮೂಲದ ಆರೋಪಿಗಳನ್ನು ಖಚಿತ ಮಾಹಿತಿಯಂತೆ ಮುಲ್ಕಿ ಕೆಎಸ್ ರಾವ್ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಬಂಧಿಸಿದ್ದು ಆರೋಪಿಗಳಿಂದ ಲಕ್ಷಾಂತರ ರೂ ಮೌಲ್ಯದ ಸುಮಾರು 6 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ತ್ರಿಪುರ ಮೂಲದ ಸಚ್ಲಾಂಗ್ ದೆಬರ್ಮ(22) ಮತ್ತುಪ್ರಮೇಶ್ ದೆಬರ್ಮ(22) ಎಂದು ಗುರುತಿಸಲಾಗಿದೆ.
ಆರೋಪಿಗಳು ಗಾಂಜಾ ವನ್ನು ತಲಾ ಒಂದುವರೆ ಕೆಜಿಯಂತೆ ಪಾರ್ಸೆಲ್ ಮಾಡಿ ಸೂಟ್ಕೇಸ್ ನ ಒಳಗಡೆ ಪ್ಯಾಕ್ ಮಾಡಿ ಯಾರಿಗೂ ಅನುಮಾನ ಬಾರದಂತೆ ಬಚ್ಚಿಟ್ಟು ಮುಲ್ಕಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಖಚಿತ ಮಾಹಿತಿಯಂತೆ ಮುಲ್ಕಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ರೈಲ್ವೆ ಸ್ಟೇಷನ್ ಮುಖಾಂತರ ಮಣಿಪಾಲಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಹೋಗುತ್ತಿದ್ದರು ಎಂಬ ಮಾಹಿತಿ ಇದ್ದು ಪೊಲೀಸರು ಆರೋಪಿಗಳ ಯತ್ನವನ್ನು ವಿಫಲಗೊಳಿಸಿದ್ದು ಗಾಂಜಾ ಮಾರಾಟಗಾರರ ಕಿಂಗ್ ಪಿನ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ
ಕಾರ್ಯಾಚರಣೆಯಲ್ಲಿ ಮುಲ್ಕಿ ಪೊಲೀಸ್ ಉಪನಿರೀಕ್ಷಕ ವಿನಾಯಕ ಬಾವಿಕಟ್ಟೆ, ಸಿಬ್ಬಂದಿಗಳಾದ ಸಂಜೀವ, ಚಂದ್ರಶೇಖರ್, ಅರುಣ್ ಕುಮಾರ್, ಸುರೇಂದ್ರ, ವೀರೇಶ್ ಭಾಗವಹಿಸಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page