ಜಾನುವಾರು ಬಂಜೆತನ ಹಾಗೂ ಬ್ರಹತ್ ಆರೋಗ್ಯ ತಪಾಸಣಾ ಶಿಬಿರ


ಬೈಂದೂರು:ಜಾನುವಾರು ಬಂಜೆತನ ಹಾಗೂ ಬ್ರಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ ಬಿಜೂರು ಪಂಚಾಯತ್ ವ್ಯಾಪ್ತಿಯಲ್ಲಿ ಭಾನುವಾರ ನಡೆಯಿತು.ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಶಿಬಿರಕ್ಕೆ ಚಾಲನೆಯನ್ನು ನೀಡಿದರು.
ಬಿಜೂರು ಪಂಚಾಯತ್ ಉಪಾಧ್ಯಕ್ಷ ರಂಜಿತ್, ಸದಸ್ಯರಾದ ವೀರೇಂದ್ರ ಶೆಟ್ಟಿ, ನಾಗರಾಜ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ನಾಯಿಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಯಿತು.ಲವಣ ಮಿಶ್ರಿತ ಆಹಾರದ ಪೊಟ್ಟಣ ವಿತರಿಸಲಾಯಿತು.ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಾಗರಾಜ,ಡಾ.ರೆಡ್ಡಪ್ಪ ಎಂ.ಸಿ ಉಪನಿರ್ದೇಶಕರು (ಆಡಳಿತ) ರವರ ಮಾರ್ಗರ್ಶನದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಬಿಜೂರ್ ಪಂಚಾಯತ್ನ ಪಶು ಸಖಿ ಶಿಲ್ಪ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಇಲಾಖಾ ಸಿಬ್ಬಂದಿಗಳಾದ ಸಿದ್ರಾಮ, ಪ್ರಶಾಂತ್ ಕುಲ್ಕರ್ಣಿ,ಪಾರ್ವತಿ, ಅಶ್ವಿನಿ, ಶಿಲ್ಪ ಮುಂತಾದವರು ಹಾಜರಿದ್ದರು.