ಮರವಂತೆ ಬೀಚ್ ಸೌಂದರ್ಯಕ್ಕೆ ಮನಸೋತ ವಿರೇಂದ್ರ ಸೆಹ್ವಾಗ್

ಉಡುಪಿ:ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷ ದ್ವೀಪಕ್ಕೆ ಭೇಟಿ ನೀಡಿ ಕಡಲ ತೀರದಲ್ಲಿ ವಿಹಾರ ಮಾಡಿರುದನ್ನು ಅಣುಕಿಸಿ ಕಾಲು ಕೆರೆದು ಕೊಂಡು ಖ್ಯಾತೆ ತೇಗಿದ್ದ ಮಾಲ್ಡೀವ್ಸ್ ದೇಶಕ್ಕೆ ತಿರುಗೇಟು ನೀಡಿರುವ ಕ್ರಿಕೆಟ್ ಲೋಕದ ತಾರೆ ವಿರೇಂದ್ರ ಸೆಹ್ವಾಗ್ ಅವರು ಉಡುಪಿ ಜಿಲ್ಲೆಯ ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್ನ ಫೋಟೋ ಅನ್ನು ಸಾಮಾಜಿಕ ಜಾಲಾತಾಣದಲ್ಲಿ ಪೆÇಸ್ಟ್ ಮಾಡುವುದರ ಮುಖೇನ ಬೀಚ್ನ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.ಭಾರತೀಯರು ಭಾರತ ದೇಶದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತೆ ಕರೆ ನೀಡಿದ್ದಾರೆ.
ದೇಶದ ಜನಪ್ರಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತು ಭಾರತ ದೇಶದ ಟೂರಿಸಂ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮಾಲ್ಡೀವ್ಸ್ ಸರಕಾರದ ಕ್ಯಾಬಿನೆಟ್ ದರ್ಜೆ ಸಚಿವರ ವಿರುದ್ಧ ಕೆರಳಿದ ಸೆಲೆಬ್ರೆಟಿಗಳು ಹಾಗೂ ಭಾರತೀಯರು ಬೈಕಾಟ್ ಮಾಲ್ಡೀವ್ಸ್ ಎಂದು ಅಭಿಯಾನವನ್ನು ಈಗಾಗಲೇ ಆರಂಭಿಸಿದ್ದಾರೆ.ಭಾರತೀಯರ ಪ್ರತಿಕ್ರಿಯೆ ತತ್ತರಿಸಿದ ಮಾಲ್ಡೀವ್ಸ್ ಸರಕಾರ ತನ್ನ ಮೂವರು ಸಚಿವರನ್ನು ವಜಾಗೊಳಿಸಿ ಕ್ಷಮೆಯನ್ನು ಕೂಡ ಯಾಚಿಸಿದೆ.
ಅರಬ್ಬಿ ಸಮುದ್ರ ಹಾಗೂ ಸೌಪರ್ಣಿಕಾ ನದಿ ತೀರ ಪ್ರದೇಶವನ್ನು ಹೊಂದಿರುವ ತ್ರಾಸಿ-ಮರವಂತೆ ಬೀಚ್ ನಡುವೆ ಸುಮಾರು 2.5 ಕಿ.ಮೀ ವರೆಗೆ ರಾಷ್ಟ್ರೀಯ ಹೆದ್ದಾರಿ-66 ಹಾದು ಹೋಗಿದೆ.ತನ್ನ ಅದಮ್ಯ ಸೌಂದರ್ಯದಿಂದಲೇ ಕಣ್ಣ್ ಮನ ಸೆಳೆಯುವ ವಿಶ್ವಪ್ರಸಿದ್ಧ ತ್ರಾಸಿ ಮರವಂತೆ ಬೀಚ್ನ ಸೌಂದರ್ಯಕ್ಕೆ ಮನಸೋತವರೆ ಇಲ್ಲಾ.ನೀಲಿ ಬಣ್ಣದೊಂದಿಗೆ ಕಂಗೊಳಿಸುತ್ತಿರುವ ವಿಶ್ವ ಪ್ರಸಿದ್ಧ ತ್ರಾಸಿ ಮರವಂತೆ ಬೀಚ್ಗೆ ಸೆಹ್ವಾಗ್ ಫೀದಾ ಆಗಿದ್ದಾರೆ.
