ವಿದ್ಯಾರ್ಥಿಗಳಿಂದ ಭರ್ಜರಿ ವ್ಯಾಪಾರ ವಹಿವಾಟು
![](https://kundapurtimes.com/wp-content/uploads/2024/02/WhatsApp-Image-2024-02-28-at-9.34.14-PM-1024x518.jpeg)
ಕುಂದಾಪುರ:ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಚಟುವಟಿಕೆಯನ್ನು ವೃದ್ಧಿಸುವ ದೃಷ್ಟಿಯಿಂದ ಕುಂದಾಪುರ ತಾಲೂಕಿನ ಬೈಂದೂರು ವಲಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯಲ್ಲಿ ಬುಧವಾರ ನಡೆದ ಮೆಟ್ರಿಕ್ ಮೇಳದ ಅಂಗವಾಗಿ ಶಾಲಾ ಆವರಣದಲ್ಲಿ ಆಯೋಜಿಸಿದ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ಭರ್ಜರಿ ವ್ಯಾಪಾರ ಮಾಡುವುದರ ಮುಖೇನ ಗಮನ ಸೆಳೆದಿದ್ದಾರೆ.
ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಹಣ್ಣುಗಳು,ಬಸಳೆ,ಹರಿವೆ,ಗೆಣಸು,ಮೆಣಸು,ತೆಂಗಿನಕಾಯಿ,ಸವತೆ ಕಾಯಿ,ಬದನೆಕಾಯಿ,ಇರುಳ್ಳಿ, ಬಾಳೆ ಹಣ್ಣು,ಸ್ಟೇಷನರಿ ಐಟಾಂ,ಜ್ಯೂಸ್ ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ಸ್ಟಾಲ್ನಲ್ಲಿ ಇರಿಸಿ ಮಾರಾಟ ಮಾಡುವುದರ ಮುಖೇನ ವ್ಯಾಪಾರ ವಹಿವಾಟನ್ನು ಮಾಡಿದರು.ಶಾಲಾ ಶಿಕ್ಷಕರು,ಎಸ್ಡಿಎಂಸಿ ಸದಸ್ಯರು, ಪೋಷಕರು ವಿದ್ಯಾರ್ಥಿಗಳಿಂದ ವಸ್ತುಗಳನ್ನು ಖರೀದಿಸುವುದ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿದರು.