ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ಪಿಕಪ್ ವಾಹನ ಪಲ್ಟಿ

ಕುಂದಾಪುರ:ಹಣ್ಣನ್ನು ತುಂಬಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೈಂದೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಪಿಕಪ್ ಗಾಡಿ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆ ಮಧ್ಯೆ ಪಲ್ಟಿಯಾಗಿ ಉರುಳಿ ಬಿದ್ದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅವೈಜ್ಞಾನಿಕತೆ ಯಿಂದ ಮುಳ್ಳಿಕಟ್ಟೆ ಸರ್ಕಲ್ ವಾಹನ ಸವಾರರಿಗೆ ಕಂಟಕವಾಗಿದ್ದು ಸರ್ಕಲ್ ಅನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಬೇಕ್ಕೆನ್ನುವುದು ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ.ಹೆದ್ದಾರಿ ಇಲಾಖೆ ಇಲ್ಲಿ […]

ಶೃಂಗೇರಿ:ಗುರುನಮನ ಕಾರ್ಯಕ್ರಮ,ವಿದ್ವಾಂಸರಿಗೆ ಸನ್ಮಾನ

ಕುಂದಾಪುರ:ವೇದಾಭಿಮಾನಿಗಳು ಘನಪಾಠಿ ಲಕ್ಷ್ಮೀನಾರಾಯಣ ಭಟ್ ಅವರ ನೇತೃತ್ವದಲ್ಲಿ ಶೃಂಗೇರಿ ಶ್ರೀಮದ್ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಗುರುನಮನ ಕಾರ್ಯಕ್ರಮ ಶ್ರೀವಿಧುಶೇಖರ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಶೃಂಗೇರಿಯಲ್ಲಿ ನಡೆಯಿತು.ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಅಗ್ನಿಹೋತ್ರಿ ವಾಸುದೇವ ಜೋಗಳೇಕರ್ ಗೋಕರ್ಣ (ಋಗ್ವೇದ),ಅಗ್ನಿಹೋತ್ರಿ ನರಸಿಂಹ ಭಟ್ ಉಮ್ಮಚಗಿ (ಯಜುರ್ವೇದ) ಹಾಗೂ ರಾಮಮೂರ್ತಿ ಶ್ರೌತಿಗಳು ವಿದ್ಯಾರಣ್ಯಪುರ ಶೃಂಗೇರಿ (ಸಾಮವೇದ) ಅವರಿಗೆ ಫಲಪುಷ್ಪ ಸಹಿತ 4.50 ಲಕ್ಷ.ರೂ ನಗದು ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕುಂದಾಪುರ ತಾಲೂಕಿನ ಹೊಸಾಡು ಶ್ರೀ ಗಣೇಶ ಕ್ರೆಡಿಟ್ ಸೊಸೈಟಿ ಅಧ್ಯಕ್ಷ […]

ಮರವಂತೆ ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಬೆಳ್ಳಿ ರಥ ನಿರ್ಮಾಣಕ್ಕೆ ಧನ ಸಹಾಯ ಹಸ್ತಾಂತರ

ಕುಂದಾಪುರ:ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪುಂದ ವತಿಯಿಂದ ಮರವಂತೆ ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಬೆಳ್ಳಿ ರಥ ನಿರ್ಮಾಣಕ್ಕೆ 10,00,101 ರೂ ಮೊತ್ತದ ಚೆಕ್‍ನ್ನು ಶುಕ್ರವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಸ್ತಾಂತರಿಸಲಾಯಿತು.ಸಂಘದ ಅಧ್ಯಕ್ಷ ಉಪ್ಪುಂದ ಆನಂದ ಖಾರ್ವಿ ಮಾತನಾಡಿ, ಮೀನುಗಾರರು ಈ ಹಿಂದೆ ದೇವಸ್ಥಾನಕ್ಕೆ ಉಪ್ಪುಂದ ರಥವನ್ನು ನೀಡಿದ್ದು ಶ್ರೀ ದೇವರಲ್ಲಿ ಮೀನುಗಾರಿಕಾ ಉದ್ಯೋಗದಲ್ಲಿ ಸಮೃದ್ಧಿಯನ್ನು ಕರುಣಿಸುವ ಸಲುವಾಗಿ ಪ್ರಾರ್ಥಿಸಿದಂತೆ ಬೆಳ್ಳಿ ರಥದ ನಿರ್ಮಾಣಕ್ಕೆ ಸಂಘದ ಮೀನುಗಾರರ ವತಿಯಿಂದ ಈ ಕೊಡುಗೆ ನೀಡಲಾಗಿದೆ ಎಂದು […]

You cannot copy content of this page