ಬಡಾಕೆರೆ ಶಾಲೆ ದತ್ತು ಸ್ವೀಕಾರ,ಪೂರ್ವಭಾವಿ ಸಭೆ

Share

Advertisement
Advertisement
Advertisement

ಕುಂದಾಪುರ:ಅವನತಿಯಲ್ಲಿರುವ ಸರಕಾರಿ ಶಾಲೆಗಳನ್ನು ಉದ್ಯಮಿಗಳು,ದಾನಿಗಳು,ಸಂಘ ಸಂಸ್ಥೆಗಳು ದತ್ತು ಸ್ವೀಕಾರ ಮಾಡುವುದರ ಮುಖೇನ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಬಡಾಕೆರೆ ಶಾಲೆಯಲ್ಲಿ ಬುಧವಾರ ನಡೆದ ಶಾಲೆ ದತ್ತು ಸ್ವೀಕಾರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳನ್ನು ಉಳಿಸಬೇಕು ಎನ್ನುವ ನೆಲೆಯಲ್ಲಿ 300 ಟ್ರಿಸ್ ಎನ್ನುವ ವಿನೂತನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಇವೊಂದು ಪುಣ್ಯದ ಕೆಲಸದಲ್ಲಿ ಭಾಗಿದಾರರಾಗುವ ಮುಖೇನ ಮುಖೇನ ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಕೈ ಜೋಡಿಸಬೇಕು ಎಂದು ವಿನಂತಿಸಿಕೊಂಡರು.

ಪ್ರಾಂತೀಯ ಧರ್ಮಾದಿಕಾರಿಗಳು ಶ್ರೀಶಾರದ ಪೀಠಂ ಶೃಂಗೇರಿ ವೇ.ಮೂ ಲೋಕೇಶ್ ಅಡಿಗ ನಾಗ ಪಾತ್ರಿಗಳು ನಾವುಂದ ಬಡಾಕೆರೆ ಅವರು ಬಡಾಕೆರೆ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಮಾತನಾಡಿ,ಆಧುನಿಕ ಕಾಲ ಘಟ್ಟದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ವೈಭವೀಕರಣವನ್ನು ನೋಡಿದರೆ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಎನ್ನುವುದು ಮರಿಚಿಕೆ ಆಗಿದೆ ಎನ್ನುವ ಭಾವ ಮೂಡುತ್ತಿದೆ.ಪ್ರತಿಯೊಂದು ಮಗುವಿಗೂ ವಿದ್ಯೆ ಎನ್ನುವುದು ಬಹು ಮುಖ್ಯವಾದ ಅಂಶವಾಗಿದ್ದು ಇವೊಂದು ನೆಲೆಯಲ್ಲಿ ನಮ್ಮೂರಿನ ಮಕ್ಕಳಿಗೆ ಒಳ್ಳೆ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಶಾಲೆಯನ್ನು ದತ್ತು ಸ್ವೀಕಾರ ಮಾಡಲು ನಿರ್ಧರಿಸಲಾಗಿದೆ.ಶಾಲೆಯ ಸರ್ವತೊಮುಖ ಅಭಿವೃದ್ಧಿಗೆ ಊರಿನವರು ಸಹಕರಿಸಬೇಕೆಂದು ವಿನಂತಿಸಿಕೊಂಡರು.
ಊರಿನ ಜನರಲ್ಲಿ ಬಂಧುತ್ವ ಬೆಳೆದಾಗ ಮಾತ್ರ ಬಾಂಧವ್ಯ ಮೂಡಲು ಸಾಧ್ಯ ಪ್ರೀತಿಯಿಂದ ದಾನ ಮಾಡಿದರೆ ಗುರುತ್ವ ಗೌರವ ಸಿಗುತ್ತದೆ ಎಂದು ನುಡಿದರು.
ನಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಅಧ್ಯಕ್ಷತೆ ವಹಿಸಿದ್ದರು,ಹಿರಿಯರಾದ ಮಾದವ ಅಡಿಗ,ವಾಸು ಪೂಜಾರಿ,ನಾಡ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ ಶೆಟ್ಟಿ,ಅಶೋಕ ಶೆಟ್ಟಿ ಸಂಸಾಡಿ,ಪ್ರವೀಣ್ ಶೆಟ್ಟಿ ಕಡಿಕೆ ಮತ್ತು ಗ್ರಾಮಸ್ಥರು,ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.ಪಂಚಾಯಿತಿ ಸದಸ್ಯ ಶ್ರೀಧರ ದೇವಾಡಿಗ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾ ಮುಖ್ಯೋಪಾಧ್ಯಾಯಿನಿ ರೋಹಿಣಿ ವಂದಿಸಿದರು.

ವರದಿ-ಜಗದೀಶ ದೇವಾಡಿಗ ಮುಳ್ಳಿಕಟ್ಟೆ

Advertisement


Share

Leave a comment

Your email address will not be published. Required fields are marked *

You cannot copy content of this page