ಅಷ್ಟಪವಿತ್ರ ನಾಗಮಂಡಲೋತ್ಸವ,ಚಪ್ಪರ ಮುಹೂರ್ತ
ಕುಂದಾಪುರ:ತಾಲೂಕಿನ ಕನ್ಯಾನ ಗ್ರಾಮದ ಕೂಡ್ಲು ಬಾಡಬೆಟ್ಟು ಶ್ರೀಶನೀಶ್ವರ ಮತ್ತು ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್.14 ರಂದು ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಚಪ್ಪರ ಮುಹೂರ್ತ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಶ್ರೀಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ಜಯರಾಮ ಸ್ವಾಮಿ,ಬಸ್ರೂರು ಶ್ರೀಮಾಹಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಬಿ.ಅಪ್ಪಣ್ಣ ಹೆಗ್ಡೆ,ಕ್ಷೇತ್ರದ ಪ್ರಧಾನ ಪುರೋಹಿತರಾದ ಗುರುರಾಜ ಸೋಮಯಾಜಿ ಬ್ರಹ್ಮನಜೆಡ್ಡು ನೇರಳಕಟ್ಟೆ ಅವರು ಚಪ್ಪರ ಮುಹೂರ್ತಕ್ಕೆ ಚಾಲನೆಯನ್ನು ನೀಡಿದರು.ಶ್ರೀಕ್ಷೇತ್ರ ಧರ್ಮಸ್ಥಳ ಕುಂದಾಪು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ರಾಜೇಂದ್ರ ಕುಮಾರ ಬಸ್ರೂರು,ನಾಗಮಂಡಲೋತ್ಸವ ಸಮಿತಿ ಮಾರ್ಗದರ್ಶಕ ರತ್ನಾಕರ ಶೆಟ್ಟಿ ಅಂಪಾರು ಮತ್ತು ಸಮಿತಿ ಅಧ್ಯಕ್ಷ ಮಂಜುನಾಥ ಖಾರ್ವಿ ಕೊಡೇರಿ,ಜಗದೀಶ್ ಆಚಾರ್ಯ ಹಟ್ಟಿಯಂಗಡಿ,ಚಂದ್ರಮತಿ ಶೆಡ್ತಿ ತಲ್ಲೂರು,ರವಿ ದೇವಾಡಿಗ ಬಾಡಬೆಟ್ಟು,ಉದ್ಯಮಿ ರವಿರಾಜ್ ದೇವಾಡಿಗ ಹಳನಾಡು,ಮಹಾಬಲ ಹಟ್ಟಿಕುದ್ರು,ರಾಜು ಸೌಕೂರು,ಗ್ರಾಮಸ್ಥರು ಉಪಸ್ಥಿತರಿದ್ದರು.