ಹಡಿಲು ಭೂಮಿಯನ್ನು ಹಸನಾಗಿಸುವ ನಿಟ್ಟಿನಲ್ಲಿ ಗದ್ದೆಗೆ ಇಳಿದ ವಿದ್ಯಾರ್ಥಿಗಳು-ಶಾಸಕ ಗುರುರಾಜ್ ಗಂಟಿಹೊಳೆ ಸಾಥ್
ಬೈಂದೂರು:ಜೆಸಿಐ ಉಪ್ಪುಂದ,ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಹಡಿಲು ಭೂಮಿಯನ್ನು ಹಸನಾಗಿಸುವ ಸಂಕಲ್ಪದೊಂದಿಗೆ
“ವಿದ್ಯಾರ್ಥಿಗಳಿಂದ ಗದ್ದೆ ನಾಟಿ” ಎಂಬ ವಿಶೇಷ ಕಾರ್ಯಕ್ರಮ ಶಿರೂರು ಕರಾವಳಿಯಲ್ಲಿ ನಡೆಯಿತು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಗದ್ದೆ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಯುವಜನರು ತಮ್ಮ ಓದಿನ ಜೊತೆಗೆ ಕೃಷಿ ಕ್ಷೇತ್ರದ ಬೆಳವಣಿಗೆ ಬಗ್ಗೆ ಆಸಕ್ತಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ದೀಪಕ್ ಕುಮಾರ್ ಶೆಟ್ಟಿ ಕಾರ್ಯಾಧ್ಯಕ್ಷರು,ಕಾಲೇಜು ಅಭಿವೃದ್ಧಿ ಸಮಿತಿ ಬೈಂದೂರು , ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಅಧ್ಯಕ್ಷರು ಜೆಸಿಐ ಉಪ್ಪುಂದ,ನಾಗರಾಜ ಶೆಟ್ಟಿ ಪ್ರಾಂಶುಪಾಲರು ಬೈಂದೂರು,
ಅಕ್ಷತಾ ಗಿರೀಶ್ ಐತಾಳ್ ನಿರ್ದೇಶಕರು,ಕಾರ್ಯಕ್ರಮ ವಿಭಾಗ ಜೆಸಿಐ ವಲಯ 15,
ಗಣೇಶ್ ಗಾಣಿಗ ಉಪ್ಪುಂದ,ಶಿರೂರು ರೈತರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ,
ರೈತ ಸಂಘದ ಉಪಾಧ್ಯಕ್ಷರು ವೆಂಕಟ ಪೂಜಾರಿ,ನಿಕಟ ಪೂರ್ವ ಅಧ್ಯಕ್ಷ ನಾಗರಾಜ ಪೂಜಾರಿ,
ಅಶೋಕ್ ಶೆಟ್ಟಿ ಕಾರಿಕಟ್ಟೆ,ಯುವಶಕ್ತಿ ಅಧ್ಯಕ್ಷರಾದ ವಿಠಲ ಬಿಲ್ಲವ ,ಅನುಷಾ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಕೃಷಿ ಇಲಾಖೆ ಬೈಂದೂರು,ಶಾಲಾ ಶಿಕ್ಷಕರು ಜೆಸಿಐ ಉಪ್ಪುಂದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಎನ್ಎಸ್ಎಸ್ ಯೋಜನಾಧಿಕಾರಿ ಲತಾ ಪೂಜಾರಿ ಸ್ವಾಗತಿಸಿದರು.ನವೀನ್ ಹೆಚ್. ಜಿ ಕಾರ್ಯಕ್ರಮವನ್ನು ನಿರೂಪಿಸಿದರು.
![](https://kundapurtimes.com/wp-content/uploads/2023/07/GURU-2-1024x464.jpeg)