ಹೊಲಿಗೆ ಯಂತ್ರ,ಧನ ಸಹಾಯ ವಿತರಣೆ
ಬೈಂದೂರು:ಜಮೀಯ್ಯತುಲ್ ಫಲಾಹ್ ಬೈಂದೂರು ತಾಲೂಕು ಘಟಕದ ವತಿಯಿಂದ ಮುಸ್ಲಿಂ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮತ್ತು ಮುಸ್ಲಿಂ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಬೈಂದೂರು ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಜಮೀಯ್ಯತುಲ್ ಫಲಾಹ್ ಬೈಂದೂರು ಅಧ್ಯಕ್ಷ ಮನ್ಸೂರ್ ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮೌಲನ ಮುಸಾಫ್ ಯೂಸುಫ್ ಜಿ ದುವಾ ನೆರವೇರಿಸಿದರು.ಬೈಂದೂರು ಕ್ಷೇತ್ರದ ಶಿಕ್ಷಣ ಅಧಿಕಾರಿ ಮಂಜುನಾಥ್ ಜಿ. ಉದ್ಘಾಟಿಸಿದರು.ಜನಾಬ್ ಶಬೀ ಅಹ್ಮದ್ ಖಾಝಿ (ಅಧ್ಯಕ್ಷರು ಜಮೀಯ್ಯತುಲ್ ಫಲಾಹ್ ಉಡುಪಿ ಜಿಲ್ಲೆ) ಶುಭಹಾರೈಸಿದರು.ಎಮ್ ಎಮ್ ಜಿಪ್ರಿ ಉದ್ಯಮಿ ಶಿರೂರು ಹಾಗೂ ಜನಾಬ್ ಶಬೀ ಅಹ್ಮದ್ ಖಾಝಿ ಯವರನ್ನು ಸನ್ಮಾನಿಸಲಾಯಿತು.ಅಬು ಮುಹಮ್ಮದ್ (ಅಧ್ಯಕ್ಷರು ಜಮೀಯ್ಯತುಲ್ ಫಲಾಹ್ ಕುಂದಾಪುರ),ಹುಸೇನ್ ಹೈಕಾಡಿ,ಎಚ್. ಎಸ್. ಸಿದ್ದಿಕ್, ಸಯ್ಯದ್ ಅಜ್ಮಲ್ ಉದ್ಯಮಿ ಶಿರೂರ್ ಉಪಸ್ಥಿತರಿದ್ದರು. ಮುಹ್ಸಿನ್ ಯೂಸುಫ್ ಜೀ ಸ್ವಾಗತಿಸಿದರು.ಕುರ್ಷಾದ್ ವಂದಿಸಿದರು.ಶೈಖ್ ಫಯಾಝ್ ಅಲಿ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.