ದೋಣಿ ಮೂಲಕ ತೆರಳಿ ಮತದಾನದ ಜಾಗೃತಿ

Share

Advertisement
Advertisement
Advertisement

ಕುಂದಾಪುರ:ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಬÉೈಂದೂರು ತಾಲೂಕು ಸ್ವೀಪ್ ಸಮಿತಿ,ಬÉೈಂದೂರು ತಾಲೂಕು ಆಡಳಿತ ಹಾಗೂ ನಾಡ ಗ್ರಾ.ಪಂ ವತಿಯಿಂದ ನಾಡ ಗ್ರಾ.ಪಂ ವ್ಯಾಪ್ತಿಯ ಕುರು ಕುದ್ರುವಿನಲ್ಲಿರುವ ದ್ವೀಪ ವಾಸಿಗಳಿಗೆ ಅಧಿಕಾರಿಗಳ ತಂಡವು ದೋಣಿ ಮೂಲಕ ತೆರಳಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಗುರುವಾರ ನಡೆಯಿತು.ಬÉೈಂದೂರು ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಎಸ್. ಬಡಕುಂದ್ರಿ ನೇತೃತ್ವ ತಂಡ ಸ್ವೀಪ್ ಸಮಿತಿಯ ತಂಡವು ದೋಣಿಯ ಮೂಲಕ ನದಿ ದಾಟಿ, ಕುರು ಕುದ್ರು ನಿವಾಸಿಗಳ ಮನೆಗಳಿಗೆ ತೆರಳಿ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡಬೇಕೆಂದು ಮನವಿ ಮಾಡಿದರು.ಈ ಸಂದರ್ಭ ಸ್ಥಳೀಯರೊಂದಿಗೆ ಸಂವಾದ ನಡೆಸಿದ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಎಸ್. ಬಡಕುಂದ್ರಿ,ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವೊಬ್ಬ ಮತದಾರನು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು.ದೇಶದ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಮತ ಚಲಾಯಿಸುವುದು ಅಗತ್ಯ.ನಮ್ಮ ಮತದ ಮಹತ್ವ ಅರಿತಾಗ ಮಾತ್ರ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜ್ಞಾವಂತ ಪ್ರಜೆಯಾಗಲು ಸಾಧ್ಯ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ದ್ವೀಪ ವಾಸಿಗಳಿಗೆ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಬÉೈಂದೂರು ತಾ.ಪಂ. ಸಹಾಯಕ ನಿರ್ದೇಶಕ ಸುರೇಶ್,ನಾಡ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್ ಮೊಗವೀರ, ಎನ್‍ಆರ್‍ಎಲ್‍ಎಂ ಸಿಬ್ಬಂದಿ,ಸಂಜೀವಿನಿ ಸಂಘದ ಸದಸ್ಯರು,ರೇ|ಫಾ| ರಾಬರ್ಟ್ ಝಡ್ ಎಂ. ಡಿ’ಸೋಜಾ ಸ್ಮಾರಕ ಐಟಿಐ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು,ಸಿಬಂದಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page