ಕಾರುಗಳ ನಡುವೆ ಅಪಘಾತ, ಪ್ರಯಾಣಿಕರು ಪಾರು
![](https://kundapurtimes.com/wp-content/uploads/2024/02/WhatsApp-Image-2024-02-22-at-4.11.17-PM-1-1024x919.jpeg)
ಕೋಟ:ಎರಡು ಕಾರುಗಳು ಮುಖಮುಖಿ ಡಿಕ್ಕಿ ಹೊಡೆದು ಕಾರು ಜಖಂ ಗೊಂಡು ಪ್ರಯಾಣಿಕರು ಪಾರಾದ ಘಟನೆ ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ 66 ರ ಶ್ರೀ ಗುರುನರಸಿಂಹ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬ್ರೇಝ ಕಾರಿಗೆ ಆಂಜನೇಯ ದೇವಸ್ಥಾನದಿಂದ ಹೆದ್ದಾರಿಗೆ ಬಂದ ಇಕೋ ಕಾರು ನೇರ ಡಿಕ್ಕಿ ಹೊಡೆದಿದೆ.
ಈ ಅಪಘಾತದಿಂದ ಎರಡು ಕಾರಿನ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು,
ಕಾರುಗಳು ಎರಡು ಜಖಂ ಗೊಂಡಿದೆ.