ಹೆದ್ದಾರಿಗೆ ಬಂದ ನಾಗರ ಹಾವು,ಟಿಪ್ಪರ್‌ನೊಳಗೆ ನುಗ್ಗಿಆವಾಂತರ

Share

Advertisement
Advertisement
Advertisement

ಉಡುಪಿ:ರಾಷ್ಟ್ರೀಯ ಹೆದ್ದಾರಿ 66ರ ಕೋತಲಕಟ್ಟೆ ಬಳಿ ಹೆದ್ದಾರಿಯನ್ನು ದಾಟುತ್ತಿದ್ದ ನಾಗರ ಹಾವೊಂದು ಪಾರ್ಕ್ ಮಾಡಿದ್ದ ಟಿಪ್ಪನೊಳಗೆ ಹೊಕ್ಕಿ ಆವಾಂತರ ಸೃಷ್ಟಿಸಿದ ಘಟನೆ ನಡೆದಿದೆ.
ರಸ್ತೆಯನ್ನು ದಾಟುತ್ತಿದ್ದ ನಾಗರ ಹಾವು ವಾಹನಗಳ ಚಕ್ರದಡಿಗೆ ಸಿಲುಕದಂತೆ ರಕ್ಷಿಸುವ ನಿಟ್ಟಿನಲ್ಲಿ ಸ್ಥಳೀಯರು ಸುರಕ್ಷಿತ ಪ್ರದೇಶಕ್ಕೆ ತೆರಳಲು ದಾರಿ ಮಾಡಿಕೊಡುತ್ತಿದ್ದ ಸಂದರ್ಭ ಅದೇ ಮಾರ್ಗದಲ್ಲಿ ಬರುತ್ತಿದ್ದ ಟಿಪ್ಪರ್ ಚಾಲಕನೋರ್ವ,ಹಾವನ್ನು ರಕ್ಷಣೆ ಮಾಡುತ್ತಿರುವುದನ್ನು ವೀಕ್ಷಿಸಲು ತನ್ನ
ಟಿಪ್ಪರನ್ನು ರಸ್ತೆ ಬದಿ ಪಾರ್ಕ್ ಮಾಡಿ ಬಂದಿದ್ದ.
ಅಷ್ಟರಲ್ಲಿ ರಸ್ತೆ ದಾಟುತ್ತಿದ್ದ ಹಾವು ನೇರವಾಗಿ ಟಿಪ್ಪರ್ ಅಡಿಯಿಂದ ಮೇಲೇರಿ ಟಿಪ್ಪರ್ ಒಳಗೆ ಸೇರಿ ಕುಳಿತಿತ್ತು. ಸ್ಥಳದಲ್ಲಿದ್ದವರು ಎಷ್ಟು ಪ್ರಯತ್ನಿಸಿದರೂ ಜಪ್ಪೆನ್ನದಾಗ
ಉರಗ ತಜ್ಞ ಗೋವರ್ಧನ್ ಭಟ್ ಅವರು ಸ್ಥಳಕ್ಕೆ ಧಾವಿಸಿ ಟಿಪ್ಪರ್‌ನೊಳಗೆ ಅವಿತು ಕುಳಿತಿದ್ದ ನಾಗರ ಹಾವನ್ನು ಹೊರಗೆ ತೆಗೆದು,ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.

Advertisement


Share

Leave a comment

Your email address will not be published. Required fields are marked *

You cannot copy content of this page