ಆಲೂರು:ನಿವೃತ್ತ ಸೈನಿಕ ದಿನೇಶ್ ಆಚಾರ್ಯಗೆ ಹುಟ್ಟೂರು ಗೌರವ

Share

Advertisement
Advertisement
Advertisement

ಕುಂದಾಪುರ:ಭಾರತೀಯ ಭೂ ಸೇನೆಯಲ್ಲಿ ಸಿಪಾಯಿ ಹುದ್ದೆಗೆ ಸೇರಿ ಹವಾಲ್ದಾರರಾಗಿ ನಿವೃತ್ತಿ ಹೊಂದಿರುವ ಆಲೂರು ಗ್ರಾಮದ ನಿವಾಸಿ ದಿನೇಶ್ ಆಚಾರ್ಯ ಅವರನ್ನು ಅವರ ತಂದೆ ತಾಯಿಯೊಂದಿಗೆ ಆಲೂರು-ಹರ್ಕೂರು ಗ್ರಾಮಸ್ಥರ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಆಲೂರು ಗ್ರಾ.ಪಂ ಅಧ್ಯಕ್ಷ ರಾಜೇಶ್ ಎನ್ ದೇವಾಡಿಗ,ಮಾಜಿ ಉಪಾಧ್ಯಕ್ಷ ರವಿ ಶೆಟ್ಟಿ ಆಲೂರು ಮತ್ತು ಸದಸ್ಯರು,ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ,ಬಾಂಧವ್ಯ ಬಳಗದ ಸುಧಾಕರ ಪೂಜಾರಿ ಮತ್ತು ಸದಸ್ಯರು,ಸ್ಥಳೀಯರು,ಉಪಸ್ಥಿತರಿದ್ದರು.
೨೧ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಊರಿಗೆ ಮರಳಿದ ನಿವೃತ್ತ ಸೇನಾ ಹವಾಲ್ದಾರ್ ದಿನೇಶ್ ಆಚಾರ್ಯ ಅವರನ್ನು ಮುಳ್ಳಿಕಟ್ಟೆ ಯಿಂದ ಆಲೂರು ತನಕ ಮೆರವಣಿಗೆಯಲ್ಲಿ ಚಂಡೆಯೊAದಿಗೆ ಬರಮಾಡಿಕೊಳ್ಳಲಾಯಿತು.ಆಲೂರು ಗ್ರಾಮ ಪಂಚಾಯತ್ ಮತ್ತು ಬಂಟ್ವಾಡಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ನಿವೃತ್ತ ಸೈನಿಕರಿಗೆ ಗೌರವನ್ನು ಸಲ್ಲಿಸಿದರು.ದಾರಿ ಉದ್ದಕ್ಕೂ ಸಾರ್ವಜನಿಕರು ಜೈ ಘೋಷ ಕೂಗಿದರು.

Advertisement


Share

Leave a comment

Your email address will not be published. Required fields are marked *

You cannot copy content of this page