ಮತ್ಸ್ಯಗಂಧ ಚಲನಚಿತ್ರ ಅದ್ದೂರಿಯಾಗಿ ಬಿಡುಗಡೆ,ಅಭಿಮಾನಿಗಳಿಗೆ ಹರ್ಷ

Share

Advertisement
Advertisement
Advertisement

ಕುಂದಾಪುರ:ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಮತ್ಸ್ಯಗಂಧ ಚಲನಚಿತ್ರ ಶುಕ್ರವಾರ ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.ಕರಾವಳಿ ಭಾಗದ ಜನರ ಜೀವನ ಪದ್ಧತಿ ಹಾಗೂ ಮೀನುಗಾರರ ಬದುಕಿನ ಬಗ್ಗೆ ಕಥಾ ಹಂದರವನ್ನು ಹೊಂದಿರುವ ಮತ್ಸ್ಯಗಂಧ ಚಲನಚಿತ್ರ ಜನರ ಮನಗೆದ್ದಿದ್ದು ಸಿನಿಮಾ ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ.

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟನೆ ಮಾಡುವ ಮೂಲಕ ಈಗಾಗಲೇ ಕನ್ನಡಿಗರ ಮನ ಗೆದ್ದಿರುವ ಮತ್ಸ್ಯಗಂಧ ಚಲನಚಿತ್ರ ನಟ ಬೈಂದೂರು ತಾಲೂಕಿನ ನಾಗರಾಜ ಪೂಜಾರಿ ಅವರ ನಟನೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ.ಟೀಸರ್ ಹಾಗೂ ಮೇಕಿಂಗ್ ವಿಚಾರದಲ್ಲಿ ಸದ್ದು ಮಾಡುತ್ತಿರುವ ಮತ್ಸ್ಯಗಂಧ ಚಲನಚಿತ್ರ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುವುದು ಗ್ಯಾರಂಟಿ.

ಮತ್ಸ್ಯಗಂಧ ಚಲನಚಿತ್ರ ನಟ ನಾಗರಾಜ ಪೂಜಾರಿ ಅವರು ಬೈಂದೂರು ಶಂಕರ ಟಾಕೀಸ್ ನಲ್ಲಿ ಚಲನಚಿತ್ರವನ್ನು ಬಿಡುಗಡೆಗೋಳಿಸಿ ಮಾತನಾಡಿ, ಮತ್ಸ್ಯಗಂಧ ಎಂದರೆ ಮೀನಿಗೆ ಸಂಬಂಧಿಸಿದ ವಿಚಾರವಾಗಿದೆ ಈ ಚಿತ್ರ ಸಂಪೂರ್ಣವಾಗಿ ಮೀನುಗಾರರ ಬದುಕು ಮತ್ತು ಬಡವರ್ಗದ ಜನರನ್ನು ಪ್ರಭಾವಿ ವ್ಯಕ್ತಿಗಳು ಯಾವ ರೀತಿ ಬಳಸಿಕೊಳ್ಳುತ್ತಾರೇ ಎನ್ನುವ ವಿಚಾರದ ಬಗ್ಗೆಯೂ ಬೆಳಕನ್ನು ಚೆಲ್ಲಿದೆ ಎಂದು ಹೇಳಿದರು.ಸಿನಿಮಾವನ್ನು ನೊಡುವುದರ ಮುಖೇನ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.

ಮತ್ಸ್ಯಗಂಧ ಚಲನಚಿತ್ರವನ್ನು ನೋಡಿದ ಸಿನಿ ಪ್ರೇಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಮತ್ಸ್ಯಗಂಧ ಚಲನಚಿತ್ರ ಶತ ದಿನ ಒಡಲಿ ಎಂದು ಶುಭಹಾರೈಸಿದರು.ಚಿತ್ರದಲ್ಲಿ ಪೃಥ್ವಿ ಅಂಬಾರ್ ಜೊತೆ ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ನಟರು ನಟಿಸಿದ್ದಾರೆ.ಕನ್ನಡ ಪಿಚ್ಚರ್ ಅರ್ಪಿಸುವ, ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣ ಆಗಿರುವ ಈ ಚಿತ್ರ ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ ಬಿ.ಎಸ್ ವಿಶ್ವನಾಥ್ ನಿರ್ಮಾಣದ ಈ ಚಿತ್ರಕ್ಕೆ ದೇವರಾಜ್ ಪೂಜಾರಿ ಆ್ಯಕ್ಷನ್​​ ಕಟ್​​ ಹೇಳಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ್ ಛಾಯಾಗ್ರಹಣ ನೀಡಿದ್ದಾರೆ. ಟೀಸರ್ ಹಾಗೂ ಮೇಕಿಂಗ್ ವಿಚಾರದಲ್ಲಿ ಸದ್ದು ಮಾಡುತ್ತಿರುವ ‘ಮತ್ಸ್ಯಗಂಧ’ ರಾಜ್ಯಾದ್ಯಂತ ಚಿತ್ರಮಂದಿರ ಪ್ರವೇಶಿಸಿದ್ದು.ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page