ಮೇ 3 ರಂದು ಅಣ್ಣಾಮಲೈ, ಬಿ.ವೈ ರಾಘವೇಂದ್ರ ಅವರಿಂದ ಬೃಹತ್ ರೋಡ್ ಶೋಬೈಕ್ ರ‍್ಯಾಲಿ*

Share

Advertisement
Advertisement
Advertisement

ಬೈಂದೂರು:ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣ ಪ್ರಚಾರ ಕಾರ್ಯ ಶರವೇಗದಲ್ಲಿ ಸಾಗುತ್ತಿದ್ದು ಮೇ 3 ರಂದು ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ರೋಡ್ ಶೋ ಆಯೋಜಿಸಲಾಗಿದೆ.
ಮೇ 3ರ ಬೆಳಗ್ಗೆ 9.30ಕ್ಕೆ ಕೊಲ್ಲೂರಿನಲ್ಲಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ರೋಡ್ ಶೋ ಗೆ ಚಾಲನೆ ನೀಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ,ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಭಾಗವಹಿಸಲಿದ್ದಾರೆ.
ಕೊಲ್ಲೂರಿಂದ ರೋಡ್ ಶೋ ಆರಂಭವಾಗಿ ವಂಡ್ಸೆ, ನೇರಳಕಟ್ಟೆ,ತಲ್ಲೂರು ವರೆಗೂ ತಲುಪಲಿದೆ.ಮಧ್ಯಾಹ್ನ ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ರೋಡ್ ಶೋ ಹಾಗೂ ಬೈಕ್ ರ‍್ಯಾಲಿ ನಡೆಯಲಿದೆ.ನಂತರ ಉಪ್ಪುಂದ ತಾರಪತಿಯಿಂದ ರೋಡ್ ಶೋ ಆರಂಭಗೊಂಡು ಕರ್ಕಿಕಾಳಿವರೆಗೂ ಸಂಚರಿಸಲಿದೆ.ಆ ಮೇಲೆ ಕಿರಿಮಂಜೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿ, ನಾವುಂದ,ಮರವಂತೆ,ತ್ರಾಸಿ, ಗುಜ್ಜಾಡಿ ಮಾರ್ಗವಾಗಿ ಗಂಗೊಳ್ಳಿಯಲ್ಲಿ ಬೃಹತ್ ರೋಡ್ ಶೊ ಅಂತ್ಯವಾಗಲಿದೆ.
ರೋಡ್ ಶೋ ಹಾಗೂ ಬೈಕ್ ರ‍್ಯಾಲಿ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಭಾಗವಹಿಸಲಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದಾದ್ಯಂತ ಅಣ್ಣಾಮಲೈ ಅವರು ರೋಡ್ ಶೋ ನಡೆಸಿ ಹೊಸ ಸಂಚಲನ ಮೂಡಿಸಲಿದ್ದಾರೆ.ಅಣ್ಣಾಮಲೈ ಅವರು ಅಣ್ಣಾಮಲೈ ಅವರು ಉಡುಪಿ ಜಿಲ್ಲೆಯಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಹೆಸರು ಗಳಿಸಿದ್ದರು.ರೋಡ್ ಶೋ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡಲು ಈಗಾಗಲೇ ಸಂಕಲ್ಪಿಸಲಾಗಿದ್ದು, ಅದರಂತೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಚಟುವಟಿಕೆಗಳು ನಡೆಯುತ್ತಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page