ನಾವುಂದ ಸಾಲ್ಬುಡದಲ್ಲಿ ಮುಳುಗಿದ ಕೃಷಿ ಭೂಮಿ
ಬೈಂದೂರು:ಕಳೆದೆರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಸೌಪರ್ಣಿಕಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆದ ಪರಿಣಾಮ ಬೈಂದೂರು ತಾಲೂಕಿನ ನೆರೆ ಬಾಧಿತ ಪ್ರದೇಶವಾದ ನಾವುಂದ ಸಾಲ್ಬುಡದಲ್ಲಿ ಸಣ್ಣ ಪ್ರಮಾಣದಲ್ಲಿ ಗುರುವಾರ ನೆರೆ ಕಾಣಸಿಕೊಂಡಿದೆ.ಕೃಷಿ ಭೂಮಿಗಳು ಜಲಾವೃತ ಗೊಂಡಿವೆ.ಮಳೆ ಹೀಗೆ ಮುಂದುವರಿದರೆ ಸೌಪರ್ಣಿಕಾ ನದಿ ಪಾತ್ರ ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಲಿದೆ.