ಕೆಳಾಕಳಿ:ಶ್ರೀಮಾರಿಕಾಂಬಾ ದೇವಿ ದೇವಸ್ಥಾನ

Share

Advertisement
Advertisement
Advertisement

ಕುಂದಾಪುರ:ತಾಲೂಕಿನ ಪ್ರಸಿದ್ಧ ಹಕ್ಲಾಡಿ ಗ್ರಾಮದ ಕೆಳಾಕಳಿ ಶ್ರೀಮಾರಿಕಾಂಬಾ ದೇವಿ ದೇವಸ್ಥಾನದಲ್ಲಿ 9ನೇ ವರ್ಷದ ಶ್ರೀ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮ ಅ.15 ಭಾನುವಾರ ದಿಂದ ಆರಂಭಗೊಂಡು ಅ.24 ಮಂಗಳವಾರದ ವರೆಗೆ ನಡೆಯಲಿದೆ.

ಶ್ರೀ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀದೇವಿಯ ಸಾನಿಧ್ಯದಲ್ಲಿ ಪ್ರತಿ ದಿನ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಮತ್ತು ಶ್ರೀದೇವಿಗೆ ವಿಶೇಷ ಪೂಜೆ ಜರುಗಲಿದೆ.ಅ.23 ರಂದು ಸೋಮವಾರ ಬೆಳಿಗ್ಗೆ 9 ರಿಂದ ದುರ್ಗಾಹೋಮ ಮತ್ತು ಚಂಡೆವಾದನ,ಮಧ್ಯಾಹ್ನ 11.30 ಕ್ಕೆ ಭಕ್ತಿ ರಸಮಂಜರಿ,12 ಕ್ಕೆ ಮಹಾಪೂಜೆ ಹಾಗೂ ದೇವಿಯ ದರ್ಶನ ಸೇವೆ,ಆಕರ್ಷಕ ಹುಲಿವೇಷ ಕುಣಿತ ತದನಂತರ ಅನ್ನಸಂತರ್ಪಣೆ ನಡೆಯಲಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page