ಭೀಕರ ಬಿರುಗಾಳಿಗೆ,74ನೇ ಉಳ್ಳೂರು ಗ್ರಾಮದಲ್ಲಿ ಹಾನಿ
ಕುಂದಾಪುರ:74ನೇ ಉಳ್ಳೂರು ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಇದ್ದಕ್ಕಿದ್ದಂತೆ ಬಿಸಿದ ಭೀಕರ ಸುಂಟರಗಾಳಿಗೆ ಮನೆ ಹಾಗೂ ಅಡಿಕೆ,ತೆಂಗಿನ ತೋಟಕ್ಕೆ ಹಾನಿ ಆಗಿ ನೂರಾರು ಮರಗಳು ಬುಡ ಸಮೇತ ಧರೆಗೆ ಉರುಳಿ ಬಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಭೀಕರ ಬಿರುಗಾಳಿಯಿಂದ ಹಾನಿಗೊಳಗಾದ 74ನೇ ಉಳ್ಳೂರು ಗ್ರಾಮಕ್ಕೆ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೆಳೆ ಹಾನಿಯ ಬಗ್ಗೆ ಶೀಘ್ರವಾಗಿ ಸ್ಥಳಕ್ಕೆ ಭೇಟಿನೀಡಿ ಪರಿಹಾರ ಬಿಡುಗಡೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಗ್ರಾಮಸ್ಥರು ಉಪಸ್ಥಿತರಿದ್ದರು.
(ಬಿರುಗಾಳಿ ಹೊಡೆತಕ್ಕೆ ಮನೆ ಮಾಡಿನ ಸೀಟ್ ಹಾರಿ ಹೋಗಿ ಮರಕ್ಕೆ ಒರಗಿ ನೆರವಾಗಿ ನಿಂತುಕೊಂಡಿದೆ)
