ಕುಂದಾಪುರ:ಅಕಾಲಿಕ ಮಳೆಯಿಂದ ಭತ್ತದ ಬೆಳೆಗೆ ಸಂಕಷ್ಟ

Share

Advertisement
Advertisement
Advertisement

ಕುಂದಾಪುರ:ಅಕಾಲಿಕವಾಗಿ ಸುರಿದ ಬಾರಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆ,ನಾಡ,ತಾರಿಬೇರು,ಜಡ್ಡಾಡಿ,ಕಡಿಕೆ,ಕೋಣ್ಕಿ ಹಾಗೂ ಹೆಮ್ಮಾಡಿ ಭಾಗದಲ್ಲಿ ಕೃಷಿ ನಷ್ಟ ಉಂಟಾಗಿದೆ.ಜಾನುವಾರುಗಳ ಬೈಹುಲ್ಲು ಬೈಲಿನಲ್ಲಿ ಕೊಳೆಯುತ್ತಿದೆ.
ಹವಾಮಾನ ವೈಪರಿತ್ಯದಿಂದಾಗಿ ಭಾನುವಾರ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಗೆ ಸಂಕಷ್ಟ ಎದುರಾಗಿದ್ದು ಮಳೆ ಕಾರಣದಿಂದ ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡದೆ ಫಸಲು ಭರಿತ ಬೆಳೆ ಬೈಲಿನಲ್ಲಿ ನಶೀಸುತ್ತಿದೆ.ಭತ್ತದ ಬೆಳೆಗೆ ಅವಶ್ಯಕವಾಗಿರುವ ಸಂದರ್ಭ ಮಳೆ ಕೈಕೊಟ್ಟಿದ್ದು ಕೊಯ್ಲು ಸಮಯದಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ.ಕೊಯ್ಲು ಮಾಡಿದ ಬೈಹುಲ್ಲು ನೀರಿನಲ್ಲಿ ಮುಳುಗಿದ್ದು ಜಾನುವಾರುಗಳಿಗೆ ಅಗತ್ಯವಾಗಿರುವ ಒಣ ಹುಲ್ಲು ಮಳೆ ಅಪೋಷಣೆ ಗೈಯುತ್ತಿದೆ.ನಾಡ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶ ಒಂದರಲ್ಲೇ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ಕೊಯ್ಲು ಮಾಡಿದ ಬೈಹುಲ್ಲು ನೀರಿನಲ್ಲಿ ಕೊಳೆಯುತ್ತಿದೆ ಹೈನುಗಾರಿಕೆಯಲ್ಲಿ ತೊಡಗಿ ಕೊಂಡಿರುವ ಕೃಷಿಕರ ಪಾಡು ಕಷ್ಟದ ಪರಿಸ್ಥಿತಿಗೆ ಸಿಲುಕಿದೆ.ಭತ್ತದ ಪೈರು ಒಣಗಿ ಸೊರಗಿ ಹೋಗಿದ್ದು ತೆನೆಗಳು ನೆಲಕ್ಕೆ ಉದುರಿ ಬೀಳುವ ಹಂತಕ್ಕೆ ತಲುಪಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page