ಜಗದ್ಗುರು ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಜಿ,ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಭೇಟಿ
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.09-AM-1024x461.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.14-AM-3-1-1024x461.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.14-AM-1-1024x576.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.12-AM-1-1024x576.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.10-AM-1-1024x461.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.11-AM-1-1024x461.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.11-AM-1-1-1024x461.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.10-AM-1-1-1024x461.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.10-AM-1024x461.jpeg)
ಕುಂದಾಪುರ:ಶ್ರೀಸಿದ್ಧಿವಿನಾಯಕ ವಸತಿ ಶಾಲೆ ಕನ್ಯಾನ ಹಟ್ಟಿಅಂಗಡಿಗೆ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಫೀಠಾಧೀಶ್ವರರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಕೃಪಾಶೀರ್ವಾದಗಳಿಂದ ಕೃಪಾಶೀರ್ವಾದಗಳಿಂದ ತತ್ಕರಕಮಲ ಸಂಜಾತರಾದ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಬುಧವಾರ ಭೇಟಿ ನೀಡಿ ಆಶೀರ್ವಚನ ನೀಡಿದರು. ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆಯಲ್ಲಿ ನೂತನವಾಗಿ ನಿರ್ಮಿಸಿರುವ ಶೃಂಗವನವನ್ನು ಉದ್ಘಾಟಿಸಿ,ಭವ ಶರಣ್ ಪ್ರಾರ್ಥನಾ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.ನೂತನ ಭಜನಾ ಆಲಯವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.
ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಿನ್ಸಿಪಾಲ್ ಶರಣ ಕುಮಾರ ಮತ್ತು ಶಾಲೆಯ ಶಿಕ್ಷಕರು,ವಿದ್ಯಾರ್ಥಿವೃಂದವರು,ಸಿಬ್ಬಂದಿ ವರ್ಗದವರು ಹಾಗೂ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಷ್ಠಾನ ಹಟ್ಟಿಅಂಗಡಿ ಅಧ್ಯಕ್ಷರು ಮತ್ತು ಸದಸ್ಯರು ಸ್ವಾಮಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಬರಮಾಡಿಕೊಂಡರು.ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ,ಭಜನೆ ಮೆರವಣಿಗೆ ಸಪಬಗನ್ನು ಹೆಚ್ಚಿಸಿತು.ಶೈಕ್ಷಣಿಕ ಚುಟುವಟಿಕೆಗೆ ಪೂರಕವಾದ ವಾತಾವರಣವನ್ನು ನೋಡಿ ಶ್ರೀಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.12-AM-1024x562.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.12-AM-2-1024x461.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.13-AM-2-1024x576.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.13-AM-1-1024x461.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.13-AM-1024x461.jpeg)
![](https://kundapurtimes.com/wp-content/uploads/2024/03/WhatsApp-Image-2024-03-14-at-12.43.14-AM-1024x461.jpeg)
ಜಗದ್ಗುರು ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಜಿಗಳು ಆಶೀರ್ವಚನ ನೀಡಿ ಮಾತನಾಡಿ,25 ವರ್ಷಗಳಿಂದ ನಡೆಯುತ್ತಿರುವ ವಿದ್ಯಾಭ್ಯಾಸದ ಚಟುವಟಿಗೆ ನೋಡಿದರೆ ಬಹಳಷ್ಟು ಖುಷಿಕೊಡುವಂತಹದ್ದು ಆವೊಂದು ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರೆಯುತ್ತಿದೆ.ವಿದ್ಯಾಭ್ಯಾಸದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕೊಟ್ಟು ಇನ್ನೂ ಉತ್ತಮವಾದ ರೀತಿಯಲ್ಲಿ ಮಕ್ಕಳನ್ನು ತಯಾರು ಮಾಡುವಂತಹ ಕಾರ್ಯಶೈಲಿ ಬಹಳಷ್ಟು ಕಾಳಜಿಯಿಂದ ಕೂಡಿದೆ ಎಂದು ಶ್ರೀಗಳು ಹೇಳಿದರು.ವಿಶೇಷವಾಗಿ ಭವ್ಯವಾದಂತಹ ಭಾರತೀಯ ಪರಂರಪರೆಯನ್ನು ಪರಿಚಯಿಸುವುದರ ಮೂಲಕ ಆಧುನಿಕವಾದಂತಹ ಜ್ಞಾನವನ್ನು ಮಕ್ಕಳಿಗೆ ನೀಡುತ್ತಾ ಉತ್ತಮವಾದ ಪ್ರಜೆಗಳನ್ನು ನಿರೂಪಿಸುವಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.
ಹಟ್ಟಿಅಂಗಡಿ ಶ್ರೀಸಿದ್ಧಿವಿನಾಯಕ ವಸತಿ ಶಾಲೆ ಪ್ರಿನ್ಸಿಪಾಲ್ ಶರಣ ಕುಮಾರ ಅವರು ಸ್ವಾಮೀಜಿಗಳನ್ನು ಸ್ವಾಗತಿಸಿಕೊಂಡು ಮಾತನಾಡಿ,ಹಟ್ಟಿಅಗಂಡಿ ಇತಿಹಾಸವನ್ನು ನೋಡಿದಾಗ 15ನೇ ಶತಮಾನದಲ್ಲಿಯೇ ಇವೊಂದು ಕ್ಷೇತ್ರಕ್ಕೆ ಶೃಂಗೇರಿ ಶ್ರೀಗಳ ಅನುಗ್ರಹ ಸಿಕ್ಕಿದೆ ಇದು ನಮ್ಮ ಪುಣ್ಯವಾಗಿದೆ ಎಂದು ಹೇಳಿದರು.ಜಗದ್ಗುರುಗಳ ಪಾದಸ್ಪರ್ಶದಿಂದ ನಮ್ಮ ವಿದ್ಯಾಸಂಸ್ಥೆಗೆ ನವಚೈತನ್ಯ ತುಂಬಿದೆ ಎಂದರು.ಗುರುಗಳ ಆಶೀರ್ವಾದ ನಮ್ಮ ಸಂಸ್ಥೆ ಮೇಲೆ ಸದಾ ಇರಬೇಕು ಎಂದು ವಿನೃಮವಾಗಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ದಕ್ಷಿಣಾ ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ ವೇ.ಮೂ ಲೋಕೇಶ್ ಅಡಿಗ ನಾಗ ಪಾತ್ರಿಗಳು ಬಡಾಕೆರೆ, ಶ್ರೀಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಅಧ್ಯಕ್ಷರಾದ ಎಲ್.ಟಿ ತಿಮ್ಮಪ್ಪ ಸಾಗರ,ಟ್ರಸ್ಟಿಗಳಾದ ಎಸ್.ನಾರಾಯಣರಾವ್,ಡಾ.ಎನ್.ಪಿ ನಾರಾಯಣ ಶೆಟ್ಟಿ,ಹೆಚ್ ಗಣೇಶ್ ಕಾಮತ್ ಗಂಗೊಳ್ಳಿ,ಕಾರ್ಯದರ್ಶಿಗಳು,ಆಡಳಿತಾಧಿಕಾರಿ ವೀಣಾ ರಶ್ಮಿ ಎಂ,ವೈಸ್ ಪ್ರಿನ್ಸಿಪಾಲ್ ರಾಮ ದೇವಾಡಿಗ,ಮುಖ್ಯೋಪಾಧ್ಯಾಯರಾದ ಸುಜಾತ ಸದಾರಾಂ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಶ್ರೀ ಸಿದ್ಧಿವಿನಾಯಕ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
(ವರದಿ:ಜಗದೀಶ ದೇವಾಡಿಗ
ಸುದ್ದಿಗಳನ್ನು ಹಾಗೂ ಜಾಹೀರಾತುಗಳನ್ನು ನಮ್ಮ ಜಾಲತಾಣದಲ್ಲಿ ಬಿತ್ತರಿಸಲು ಸಂಪರ್ಕಿಸಿ:-9916284048)